
ಶತಮಾನದ ಪಕ್ಷ ಕಾಂಗ್ರೆಸ್ ಎಷ್ಟುಹೀನಾಯ ಸ್ಥಿತಿಯಲ್ಲಿದೆ ಎಂದರೆ ಲೋಕಸಭೆಯಲ್ಲಿ ನಾಯಕನನ್ನಾಗಿ ಮಾಡಲು ಒಬ್ಬ ಒಳ್ಳೆಯ, ದೇಶದ ತುಂಬೆಲ್ಲಾ ಪರಿಚಯ ಇರುವ ವ್ಯಕ್ತಿಯೇ ಸಿಗುತ್ತಿಲ್ಲ. ಕಳೆದ ಬಾರಿ ಖರ್ಗೆ ಒಬ್ಬ ಹಿರಿಯ ಸಂಸದೀಯ ಪಟು ಹೇಗಿರಬೇಕು ಎಂದು ಪೂರ್ತಿ ಸದನಕ್ಕೆ ತೋರಿಸಿದ್ದರು. ಈ ಬಾರಿ ಅವರು ಸೋತು ಮನೆಯಲ್ಲಿದ್ದಾರೆ.
ರಾಹುಲ್ ರಾಜಿನಾಮೆ; ಕಾಂಗ್ರೆಸ್ಗೆ ಸಂಕಷ್ಟ
ಜ್ಯೋತಿರಾದಿತ್ಯ ಸಿಂಧ್ಯಾ ಸೋತು ಅರಮನೆ ಸೇರಿಕೊಂಡಿದ್ದಾರೆ. ಸ್ವಲ್ಪಮಟ್ಟಿಗೆ ಮನೀಶ್ ತಿವಾರಿ ಹೆಸರು ಇತ್ತಾದರೂ ಕ್ಯಾಪ್ಟನ್ ಅಮರಿಂದರ್ ಸಿಂಗ್ರ ಶಿಷ್ಯ ಎಂಬ ಕಾರಣಕ್ಕೆ ದಿಲ್ಲಿ ನಾಯಕರಿಗೆ ಅಪಥ್ಯ. ಕೊನೆಗೆ ಹುಡುಕಿ ತಂದಿದ್ದು, ಬಂಗಾಳಿ ಫೈರ್ಬ್ರ್ಯಾಂಡ್ ಮಮತಾ ಬ್ಯಾನರ್ಜಿಯ ಕಟ್ಟಾವಿರೋಧಿ ಅಧೀರ್ ರಂಜನ್ ಚೌಧರಿಯನ್ನು. ಇದರಿಂದ ಕಾಂಗ್ರೆಸ್ ಮತ್ತು ಮಮತಾ ನಡುವೆ ಬಿರುಕು ಜಾಸ್ತಿ ಆಗೋದು ನಿಶ್ಚಿತ. ಅಧೀರ್ ಚೌಧರಿ ಬಂಗಾಳಿ ಪಾಲಿಟಿಕ್ಸ್ ಬಿಟ್ಟು ದೇಶದ ರಾಜಕೀಯ ಮಾಡಬಲ್ಲರೇ ಎಂಬುದನ್ನು ನೋಡಬೇಕು. ಇಲ್ಲವಾದರೆ ಕಾಂಗ್ರೆಸ್ ಲೋಕಸಭೆಯಲ್ಲಿ ಪ್ರಾದೇಶಿಕ ಪಕ್ಷ ಎನಿಸಿಕೊಂಡರೂ ಆಶ್ಚರ್ಯವಿಲ್ಲ!
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ’ಇಂಡಿಯಾ ಗೇಟ್’ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.