ಕಾಂಗ್ರೆಸ್ ಮುಖಂಡನಿಂದ 16 ಎಕರೆ ಗುಳುಂ

Published : Oct 20, 2016, 03:34 AM ISTUpdated : Apr 11, 2018, 12:35 PM IST
ಕಾಂಗ್ರೆಸ್ ಮುಖಂಡನಿಂದ 16 ಎಕರೆ ಗುಳುಂ

ಸಾರಾಂಶ

ಸ್ವಾತಂತ್ರ್ಯ ಪೂರ್ವದಲ್ಲೇ ಈ ದೇವಸ್ಥಾನದ ಹೆಸರಲ್ಲಿ ಸರ್ವೆ ನಂಬರ್ 283ರಲ್ಲಿ  16ಎಕರೆ ಭೂಮಿಯನ್ನು ನೀಡಲಾಗಿತ್ತು. ಆದರೆ  2012 ರಲ್ಲಿ ಅಂದಿನ ಡಿ.ಸಿ. ಸೋಮಶೇಖರ್  ಈ ಜಾಗವನ್ನು ಜಿ.ಜೆ.ರಾಜಣ್ಣರ ಹೆಸರಿಗೆ ಖಾತೆ ಮಾಡಿಸಿಕೊಟ್ಟಿದ್ದಾರೆ. 

ತುಮಕೂರು (ಅ.20):  ತುಮಕೂರು ನಗರದಲ್ಲಿ ಬರೊಬ್ಬರಿ 16 ಎಕರೆ ಜಾಗವನ್ನು ಕಾಂಗ್ರೆಸ್ ಮುಖಂಡ ಕಬಳಿಸಿ ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಮುಖಂಡರು ಹಾಗೂ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜಿ.ಜೆ.ರಾಜಣ್ಣರ ಮೇಲೆ ಇಂಥದ್ದೊಂದು ಆರೋಪ ಕೇಳಿ ಬಂದಿದೆ.

ತಹಶೀಲ್ದಾರ ಕಚೇರಿಯ ಆವರಣದಲ್ಲಿರುವ ವಿನಾಯಕ ದೇವಸ್ಥಾನದ  16 ಎಕರೆ 31 ಗುಂಟೆ ಭೂಮಿಯನ್ನು ಪ್ರಭಾವ ಬಳಸಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲೇ ಈ ದೇವಸ್ಥಾನದ ಹೆಸರಲ್ಲಿ ಸರ್ವೆ ನಂಬರ್ 283ರಲ್ಲಿ 16ಎಕರೆ ಭೂಮಿಯನ್ನು ನೀಡಲಾಗಿತ್ತು. ಆದರೆ  2012 ರಲ್ಲಿ ಅಂದಿನ ಡಿ.ಸಿ. ಸೋಮಶೇಖರ್  ಈ ಜಾಗವನ್ನು ಜಿ.ಜೆ.ರಾಜಣ್ಣರ ಹೆಸರಿಗೆ ಖಾತೆ ಮಾಡಿಸಿಕೊಟ್ಟಿದ್ದಾರೆ. 

ಆರ್.ಟಿ.ಐ ಕಾರ್ಯಕರ್ತ  ನಾರಣಾಚಾರ್ ಮಾಹಿತಿ ಹಕ್ಕಿನಡಿ  ಮಾಹಿತಿ  ಪಡೆದಾಗ ಭೂಮಿ ಗುಳುಂ ಮಾಡಿರೋದು ಬೆಳಕಿಗೆ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?