
ಬೆಂಗಳೂರು (ಡಿ.03): ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದ ಹಾಗೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಬಿಜೆಪಿ ಮತ್ತು ಜೆಡಿಎಸ್ ಯಾತ್ರೆಗಳಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಿದ್ದವಾಗುತ್ತಾ ಇದ್ದರೆ, ಇತ್ತ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಕಸರತ್ತು ನಡೆಸುತ್ತಿದೆ.
ಬಿಜೆಪಿಯ ಪರಿವರ್ತನಾ ಯಾತ್ರೆ ಮತ್ತು ಜೆಡಿಎಸ್'ನ ಕುಮಾರ ಪರ್ವ ಯಾತ್ರಗಳಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಿದ್ದವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಜನಾಶೀರ್ವಾದ ಯಾತ್ರೆ ಯ ಮೊದಲನೇ ಹಂತ ಇದೇ ಡಿಸೆಂಬರ್ 13 ರಿಂದ 18 ರವರೆಗೆ ನಡೆಯಲಿದೆ. ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ನ ಯಾತ್ರೆಗಳ ಫುಲ್ ಡೀಟೆಲ್ಸ್ ತರಿಸಿಕೊಂಡಿರುವ ಸಿದ್ದರಾಮಯ್ಯ, ಜನಾಶೀರ್ವಾದ ಯಾತ್ರೆಯನ್ನು ಯಶಸ್ವಿಗೊಳಿಸಲು ಪ್ಲಾನ್ ರೂಪಿಸಿದ್ದಾರೆ. ಡಿಸೆಂಬರ್ ಹದಿಮೂರರಂದು ಬೀದರ್ ನ ಬಸವಕಲ್ಯಾಣದಿಂದ ಆರಂಭವಾಗುವ ಮೊದಲ ಹಂತದ ಯಾತ್ರೆ ಡಿಸೆಂಬರ್ ಹದಿನೆಂಟಕ್ಕೆ ಬಳ್ಳಾರಿ ತಲುಪಲಿದೆ. ಇನ್ನು ಜನಾಶೀರ್ವಾದ ನಡೆಯುವ ದಾರಿ ಈ ರೀತಿ ಇದೆ.
ಡಿಸೆಂಬರ್ 13 ಬಸವಕಲ್ಯಾಣ
ಡಿಸೆಂಬರ್ 14 ರಾಯಚೂರು
ಡಿಸೆಂಬರ್ 15 ಕೊಪ್ಪಳ
ಡಿಸೆಂಬರ್ 16 ಕಲಬುರಗಿ
ಡಿಸೆಂಬರ್ 17 ಯಾದಗಿರಿ
ಡಿಸೆಂಬರ್ 18 ಬಳ್ಳಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.