ರಾಜ್ಯದ ನೆಲ, ಜಲದ ಬಗ್ಗೆ ಕಾಂಗ್ರೆಸ್ಸಿಗಿಲ್ಲ ಹಿತಾಸಕ್ತಿ: ಸಿ.ಟಿ.ರವಿ

Published : Dec 24, 2017, 04:51 PM ISTUpdated : Apr 11, 2018, 12:38 PM IST
ರಾಜ್ಯದ ನೆಲ, ಜಲದ ಬಗ್ಗೆ ಕಾಂಗ್ರೆಸ್ಸಿಗಿಲ್ಲ ಹಿತಾಸಕ್ತಿ: ಸಿ.ಟಿ.ರವಿ

ಸಾರಾಂಶ

ರಾಜ್ಯದ ನೆಲ ಜಲದ ಬಗ್ಗೆ ಬಿಜೆಪಿಗಿರುವ ಹಿತಾಸಕ್ತಿ, ಕಾಂಗ್ರೆಸ್‌ಗಿಲ್ಲವೆಂದ ಸಿ.ಟಿ.ರವಿ ಮಹದಾಯಿ ವಿವಾದ ಬಗೆಹರಿಸುವಲ್ಲಿ ಬಿಜೆಪಿಯದ್ದು ಪ್ರಾಮಾಣಿಕ ಪ್ರಯತ್ನ

ಬೆಂಗಳೂರು: ಬಿಜೆಪಿ ಕಚೇರಿ ಬಳಿ ಮಹದಾಯಿ ಹೋರಾಟಗಾರರ ಧರಣಿಗೆ ಆಕ್ಷೇಪಿಸಿರುವ ಶಾಸಕ ಸಿ.ಟಿ.ರವಿ, 'ರಾಜ್ಯದ ನೆಲ ಜಲದ ಬಗ್ಗೆ ಬಿಜೆಪಿಗಿರುವ ಹಿತಾಸಕ್ತಿ, ಕಾಂಗ್ರೆಸ್‌ಗಿಲ್ಲ,' ಎಂದು ಹೇಳಿದ್ದಾರೆ. 

'ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ರವಿ, 'ಕೆಲವರ ಚಿತಾವಣೆಯಿಂದ ಮಾಧ್ಯಮಗಳ ಗಮನ ಸೆಳೆಯಲು ಹೋರಾಟಗಾರರು ಯತ್ನಿಸುತ್ತಿದ್ದಾರೆ. ಮಹದಾಯಿ ವಿವಾದ ಬಗೆಹರಿಸುವ ಬದ್ಧತೆ ಬಿಜೆಪಿಗಿದೆ. ಬಿಜೆಪಿ ಸಮ್ಮಿಶ್ರ ಸರಕಾರವಿದ್ದಾಗಲೇ ಮಹದಾಯಿ ಯೋಜನೆಗಾಗಿ 100 ಕೋಟಿ ರೂ. ಮಂಜೂರು ಮಾಡಿತ್ತು. ಈಗಲೂ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಮ್ಮತಿ ಸೂಚಿಸಿರುವುದು ಬಿಜೆಪಿಯ ಶ್ರಮಕ್ಕೆ ಕಟ್ಟುಬಿದ್ದು,' ಎಂದಿದ್ದಾರೆ.

'ಗೋವಾ ಚುನಾವಣೆ ವೇಳೆ ಹನಿ ನೀರೂ ಕೊಡುವುದಿಲ್ಲವೆಂದಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಹದಾಯಿ ವಿಚಾರದಲ್ಲಿ ಈಗ ನಾಟಕವಾಡುತ್ತಿದ್ದಾರೆ. ಗೋವಾ ಮುಖ್ಯಮಂತ್ರಿ ಪತ್ರದಿಂದ ಅಸಂತೃಪ್ತರಾದ ಕಾಂಗ್ರೆಸ್ ನಾಯಕರು, ರಾಜಕೀಯ ಪ್ರೇರಣಿಯಿಂದ ಬಿಜೆಪಿ ಕಚೇರಿ ಮುಂದೆ ಧರಣಿ ಮಾಡಿಸುತ್ತಿದ್ದಾರೆ,' ಎಂದು ರವಿ ಆರೋಪಿಸಿದ್ದಾರೆ. 

'ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಕೆಲವರು ಚಿತಾವಣೆ ಮಾಡುತ್ತಿದ್ದು, ಮಹದಾಯಿ ವಿವಾದ ಬಗೆ ಹರಿಸುವ ನಿಟ್ಟಿನಲ್ಲಿ ಬಿಜೆಪಿ ಯಾವುದೇ ರಾಜಕೀಯವನ್ನೂ ಮಾಡುತ್ತಿಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ದೇಶದಲ್ಲಿ ದೇವರಿಗೇ ಜಾಗವಿಲ್ಲ; ಬೈಬಲ್, ಕುರಾನ್ ಸಿಕ್ಕರೆ ನೇರ ಜೈಲು, ಮರಣದಂಡನೆ!
ಟ್ರಾಫಿಕ್ ದಂಡ ಇನ್ನೂ ಕಟ್ವಿಲ್ವಾ? ಹೀಗೆ ಭಾರತದಲ್ಲಿ ಬಾಕಿ ಉಳಿದಿರುವ ಮೊತ್ತ 39000 ಕೋಟಿ ರೂ