ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ರಾಘವೇಶ್ವರ ಶ್ರೀ ಹೆಸರು?

Published : Sep 16, 2017, 03:13 PM ISTUpdated : Apr 11, 2018, 12:38 PM IST
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ರಾಘವೇಶ್ವರ ಶ್ರೀ ಹೆಸರು?

ಸಾರಾಂಶ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಗೌರಿ ಲಂಕೇಶ್​​ ಹಂತಕರ ಬೆನ್ನತ್ತಿದ ಎಸ್​ಐಟಿಗೆ ಒಂದು ದೂರು ಬಂದಿದ್ದು, ರಾಜ್ಯದ ಪ್ರಭಾವಿ ಶ್ರೀಗಳ ವಿರುದ್ಧ ಆರೋಪವನ್ನು ಮಾಡಲಾಗಿದೆ. ಗೌರಿ ಲಂಕೇಶ್​​ ಹತ್ಯೆ ಪ್ರಕರಣದಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧ ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿಯಿಂದ ಎಸ್ಐಟಿಗೆ ಲಿಖಿತ ದೂರು ನೀಡಿದ್ದಾರೆ.

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಗೌರಿ ಲಂಕೇಶ್​​ ಹಂತಕರ ಬೆನ್ನತ್ತಿದ ಎಸ್​ಐಟಿಗೆ ಒಂದು ದೂರು ಬಂದಿದ್ದು, ರಾಜ್ಯದ ಪ್ರಭಾವಿ ಶ್ರೀಗಳ ವಿರುದ್ಧ ಆರೋಪವನ್ನು ಮಾಡಲಾಗಿದೆ.

ಗೌರಿ ಲಂಕೇಶ್​​ ಹತ್ಯೆ ಪ್ರಕರಣದಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧ ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿಯಿಂದ ಎಸ್ಐಟಿಗೆ ಲಿಖಿತ ದೂರು ನೀಡಿದ್ದಾರೆ.

ರಾಘವೇಶ್ವರ ಶ್ರೀಗಳ ವಿರುದ್ಧ ಅನುಮಾನ ವ್ಯಕ್ತಪಡಿಸಿದ ದಂಪತಿ, ರಾಘವೇಶ್ವರ ಶ್ರೀ ವಿರುದ್ದ 500 ಪುಟಕ್ಕೂ ಹೆಚ್ಚು ದಾಖಲೆ ನೀಡಿದ್ದಾರೆ.

ಗೌರಿ ಲಂಕೇಶ್​ ರಾಘವೇಶ್ವರ ಶ್ರೀ ವಿರುದ್ಧ ಲೇಖನ ಬರೆದಿದ್ದರು. ಇದರಿಂದ ಶ್ರೀಗಳೇ ಸುಪಾರಿ ಕೊಟ್ಟಿರುವ ಶಂಕೆ ವ್ಯಕ್ತಪಡಿಸಿ, ಗೌರಿ ಲಂಕೇಶ್​ ಹತ್ಯೆ ನಡೆದ ಮೂರನೇ ದಿನವೇ ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿ ದೂರು ನೀಡಿದ್ದಾರೆ.

ಪ್ರೇಮಲತಾ ದಿವಾಕರ್ ದಂಪತಿ ನೀಡಿದ ದಾಖಲೆಗಳನ್ನು SIT ಪರಿಶೀಲಿಸುತ್ತಿದೆ. 10 ದಿನದಲ್ಲಿ SIT ಅಧಿಕಾರಿಗಳ ನಂಬರ್​​ಗೆ ನೂರಾರು ಕರೆಗಳು ಬಂದಿವೆ. ರಾಘವೇಶ್ವರ ಶ್ರೀ ಮೇಲೆ ಶಂಕಿಸಿ SITಗೆ ನೂರಾರು ಕರೆ ಬಂದಿವೆ ಎಂದೆನ್ನಲಾಗಿದೆ. ಪರಿಶೀಲನೆ ವೇಳೆ ಪೂರಕ ಸಾಕ್ಷಿಗಳು ಸಿಕ್ಕಿಲ್ಲ ಎನ್ನುತ್ತಿದೆ ಎಸ್ಐಟಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ
ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ