
ಬೆಂಗಳೂರು: ಮನೆ ಎದುರೇ ನಡೆದ ಗುಂಡಿನ ದಾಳಿಯಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿ 11 ದಿನಗಳೇ ಕಳೆದರೂ ತನಿಖಾ ತಂಡಕ್ಕೆ ಹಂತಕರ ಸುಳಿವು ಇಲ್ಲ. ತನಿಖಾತಂಡವು 8 ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಅವುಗಳಲ್ಲಿ ‘ಟೈಗರ್ ವಿಂಗ್’ ಆಯಾಮವೂ ಒಂದು.
ಏನಿದು ಟೈಗರ್ ವಿಂಗ್?
ಹಿಂದೂ ಪರ ಒಲವು ಹೊಂದಿರುವ ಟೈಗರ್ ಸಂಘಟನೆಯು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಬಲವಾಗಿದೆ. ಪ್ರಮುಖ ಮುಸ್ಲಿಂ ಮುಖಂಡರೇ ಅದರ ಟಾರ್ಗೆಟ್. ಹಿಂದೂ ತತ್ವವನ್ನು ಪ್ರಶ್ನಿಸಿದವರ ಮೇಲೆ ಆ ಸಂಘಟನೆ ದಾಳಿ ನಡೆಸಿದ ನಿದರ್ಶನಗಳಿವೆ. ಹೀಗಾಗಿ ಎಡಪಂಥೀಯ ಧೋರಣೆ ಹೊಂದಿದ್ದ ಗೌರಿ ಅವರನ್ನು ಟೈಗರ್ ಗುರಿಯಾಗಿಸಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ಗೊತ್ತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.