ಪ್ರಭಾವ ಬಳಸಿ ಚಾಮುಂಡೇಶ್ವರಿಗೆ ಸೀರೆ ಉಡಿಸಿದರಾ ಸಿಎಂ ಪತ್ನಿ?

Published : Oct 02, 2017, 07:42 PM ISTUpdated : Apr 11, 2018, 01:08 PM IST
ಪ್ರಭಾವ ಬಳಸಿ ಚಾಮುಂಡೇಶ್ವರಿಗೆ ಸೀರೆ ಉಡಿಸಿದರಾ ಸಿಎಂ ಪತ್ನಿ?

ಸಾರಾಂಶ

ದಸರಾ ವೇಳೆ ಚಾಮುಂಡೇಶ್ವರಿಗೆ ಎರಡೆರಡು ಸೀರೆ ಉಡಿಸಲಾಗಿದೆ ಎನ್ನಲಾಗಿದ್ದು, ಸೀರೆ ವಿವಾದದಲ್ಲಿ‌ ಸಿಎಂ ಪತ್ನಿ ಪಾರ್ವತಿ ಸಿಲುಕಿದ್ದಾರೆ.

ಬೆಂಗಳೂರು (ಅ.02): ದಸರಾ ವೇಳೆ ಚಾಮುಂಡೇಶ್ವರಿಗೆ ಎರಡೆರಡು ಸೀರೆ ಉಡಿಸಲಾಗಿದೆ ಎನ್ನಲಾಗಿದ್ದು, ಸೀರೆ ವಿವಾದದಲ್ಲಿ‌ ಸಿಎಂ ಪತ್ನಿ ಪಾರ್ವತಿ ಸಿಲುಕಿದ್ದಾರೆ.

ದೇವಿ ವಿಗ್ರಹಕ್ಕೆ ಎರಡು ಸೀರೆ‌ ಉಡಿಸಲಾಗಿದ್ದು, ಮೇಯರ್ ತಾವು ಕೊಟ್ಟ ಸೀರೆಯ ಮೇಲೆ ಸಿಎಂ ಪತ್ನಿ ಪಾರ್ವತಿ ಪ್ರಭಾವ ಬಳಸಿ ಸೀರೆ ಉಡಿಸಿದ್ದಾರೆ ಎಂದಿದ್ದಾರೆ ಎಂದು ಆರೋಪಿಸಿದ್ದಾರೆ. ದಸರಾ ಜಂಬೂ ಸವಾರಿ ದಿನ ದೇವಿ ವಿಗ್ರಹಕ್ಕೆ ಎರಡು ಸೀರೆ ಉಡಿಸಲಾಗಿದ್ದು, ಮೇಯರ್ ನೀಡಿದ್ದ ನಾಲ್ಕು ಸೀರೆ ಹೊರತು ಪಡಿಸಿ ಸಿಎಂ ಪತ್ನಿ ನೀಡಿದ ಸೀರೆ ಉಡಿದ್ದು ಈಗ ವಿವಾದವಾಗಿದೆ. ನಗರದ ಜನರ ಒಳಿತಿಗಾಗಿ ನಾನು ಸೀರೆ ನೀಡಿದ್ದು, ಪ್ರತಿ ವರ್ಷ ಬೆಂಗಳೂರಿನ ಭಕ್ತರೊಬ್ಬರು ನೀಡುತ್ತಿದ್ದ ಸೀರೆ ಉಡಿಸಲಾಗುತ್ತಿತ್ತು. ಆದರೆ ಈ ವರ್ಷ ಸಿಎಂ ಪತ್ನಿ ಪಾರ್ವತಿ ನೀಡಿದ ಸೀರೆ‌ ಉಡಿಸಲಾಗಿದ್ದು ಏಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

HD Kumaraswamy birthday: ಎಚ್‌ಡಿಕೆಗೆ  ₹3.50 ಲಕ್ಷದ 25 ಗ್ರಾಂನ ಚಿನ್ನದ ಸರ ಕೊಟ್ಟ ಅಭಿಮಾನಿ!
ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ Congress-BJP ನಡುವೆ ಗದ್ದಲ