
ಬೆಂಗಳೂರು (ಅ.02): ಪ್ರಧಾನಿ ನರೇಂದ್ರ ಮೋದಿಗೆ ಅವಕಾಶ ಸಿಕ್ಕಾಗಲೆಲ್ಲಾ ಕಾಮೆಂಟ್ ಮಾಡುವ ಸಿಎಂ ಸಿದ್ದರಾಮಯ್ಯ, ಮನ್ ಕಿ ಬಾತ್ ಒಂದು ಕಾರ್ಯಕ್ರಮನಾ? ಮೋದಿ ಏನೂ ಮಾಡದೆ ಮಾತನಾಡುತ್ತಿದ್ದಾರೆ. ನಾವು ಕೆಲಸ ಮಾಡಿ ತೋರಿಸುತ್ತಿದ್ದೇವೆ . ಅದಕ್ಕೆ ಕಾಮ್ ಕಿ ಬಾತ್ ಎನ್ನುತ್ತಿದ್ದೇವೆ ಎಂದು ಮನ್ ಕೀ ಬಾತ್ಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಮೋದಿಯವರ ಮನ್ ಕಿ ಬಾತ್ ಗೆ ಪ್ರತಿಯಾಗಿ ಪ್ರಾಸ ಬರುವಂತೆ ಕಾಮ್ ಕಿ ಬಾತ್ ಎಂದು ಹೇಳಿದ್ದೇನೆ. ಅನ್ಯ ಭಾಷೆಯ ಶಬ್ದಗಳಿಗೆ ಉ ಕಾರ ಸೇರಿಸಿದರೆ ಅದು ಕನ್ನಡ ಶಬ್ದವೇ ಆಗುತ್ತದೆ. ಬಸ್'ಗೆ ಬಸ್ಸು, ಕಾರ್'ಗೆ ಕಾರು ಎಂದು ಹೇಳೋದಿಲ್ವಾ ಹಾಗೆ ಕಾಮ್ ಕಿ ಬಾತ್ ಅನ್ನೋದು ಕನ್ನಡ ಶಬ್ದವೇ ಎಂದು ಅರ್ಥೈಸಿಕೊಳ್ಳಬೇಕು ಎಂದು ಮತ್ತೆ ಕನ್ನಡದ ಪಾಠ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.