
ಬೆಳಗಾವಿ (ನ.22): ನಿನ್ನೆ ನಡೆದಿದ್ದ ಸಚಿವ ರಮೇಶ್ ಜಾರಕಿಹೊಳಿ ಮಗನ ಅದ್ದೂರಿ ಮದುವೆ ಹಿನ್ನೆಲೆಯಲ್ಲಿ ಗೈರಾಗಿದ್ದ ಸಿಎಂ ಇಂದು ಸಚಿವರ ಮನೆಗೆ ಭೇಟಿ ನೀಡಿ ನವ ದಂಪತಿಗೆ ಹಾರೈಸಿದರು.
ಬೆಳಗಾವಿಯಿಂದ ಹೆಲಿಕಾಪ್ಟರ್ ಮುಖಾಂತರ ಗೋಕಾಕ ನಗರಕ್ಕೆ ಆಗಮಿಸಿದ ಸಿದ್ದರಾಮಾಯ್ಯ ಜೊತೆ ಸಚಿವ ಪರಮೇಶ್ವರ, ಕೆ.ಜೆ ಜಾರ್ಜ್ , ರೇವಣ್ಣ ಮುಖ್ಯ ಸಚೇತಕ ಅಶೋಕ್ ಪಟ್ಟಣ ಶೆಟ್ಟಿ ಸಾಥ್ ನೀಡಿದರು.
ಸಚಿವ ರಮೇಶ್ ಜಾರಕಿಹೋಳಿ ಮಗ ಸಂತೋಷ ಮತ್ತು ಸೊಸೆ ಅಂಬಿಕಾಗೆ ಸಿಎಂ ಶುಭಾಶಯ ಕೋರಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ, ನಿನ್ನೆ ಬರಗಾಲ ವಿಷಯ ಚರ್ಚೆ ಇತ್ತು ಅದಕ್ಕೆ ಭಾಗವಹಿಸಲು ಆಗಿಲ್ಲಾ ಆದ್ದರಿಂದ ಇವತ್ತು ಆಗಮಿಸಿದ್ದೆನೆ ಎಂದು ತಿಳಿಸಿದರು. ಆದರೆ ಸಿಎಂ ಹೆಲಿಕಾಪ್ಟರ್ನಲ್ಲಿ ಮದುವೆಗೆ ಹೋಗಿದ್ದು ತೀವ್ರ ಚರ್ಚೆಗೆ ಗ್ರಾಸವಾಯ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.