ಗೃಹ ಖಾತೆ ಹೊಣೆ ಹೊರಲು ಹಿರಿಯ ನಾಯಕರು ಹಿಂದೇಟು; ಗೊಂದಲದಲ್ಲಿ ಸಿಎಂ

Published : Jun 21, 2017, 06:08 PM ISTUpdated : Apr 11, 2018, 12:59 PM IST
ಗೃಹ ಖಾತೆ ಹೊಣೆ ಹೊರಲು ಹಿರಿಯ ನಾಯಕರು ಹಿಂದೇಟು; ಗೊಂದಲದಲ್ಲಿ ಸಿಎಂ

ಸಾರಾಂಶ

ಪರಮೇಶ್ವರ್​ ರಾಜೀನಾಮೆಯಿಂದ ತೆರವಾಗಿರುವ ಗೃಹ  ಖಾತೆಯನ್ನು ಯಾರಿಗೆ ವಹಿಸಬೇಕು ಎನ್ನುವುದರ ಬಗ್ಗೆ  ಸಿಎಂ ಸಿದ್ದರಾಮಯ್ಯ  ಗೊಂದಲದಲ್ಲಿದ್ದಾರೆ.

ಬೆಂಗಳೂರು (ಜೂ.21): ಪರಮೇಶ್ವರ್​ ರಾಜೀನಾಮೆಯಿಂದ ತೆರವಾಗಿರುವ ಗೃಹ  ಖಾತೆಯನ್ನು ಯಾರಿಗೆ ವಹಿಸಬೇಕು ಎನ್ನುವುದರ ಬಗ್ಗೆ  ಸಿಎಂ ಸಿದ್ದರಾಮಯ್ಯ  ಗೊಂದಲದಲ್ಲಿದ್ದಾರೆ.

ಅಧಿವೇಶನ ಬಳಿಕ ಸಂಪುಟ ವಿಸ್ತರಣೆ  ಮಾಡಲು ಮುಂದಾಗಿದ್ದ  ಸಿಎಂ, ಸಂಪುಟ ವಿಸ್ತರಣೆಗೂ ಮುನ್ನ ಗೃಹ ಖಾತೆ ಹಂಚಿಕೆ ಮಾಡಲು ಚಿಂತನೆ ನಡೆಸಿ ಹಾಲಿ ಸಚಿವರಿಗೆ  ನೀಡಲು ಮುಂದಾಗಿದ್ದಾರೆ. ಆದರೆ ಗೃಹ ಖಾತೆ ಜವಾಬ್ದಾರಿ ಹೊರಲು ಆ ಹಿರಿಯ ಸಚಿವರು  ನಿರಾಕರಿಸುತ್ತಿದ್ದಾರೆ. ಗೃಹ ಖಾತೆ ಹಂಚಿಕೆ  ಬಗ್ಗೆ  ಹೈಕಮಾಂಡ್​  ಜೊತೆ  ಚರ್ಚಿಸುವ  ಸಾಧ್ಯತೆ ಇದ್ದು, ಪರಮೇಶ್ವರ ಅವರನ್ನೇ  ಗೃಹ ಮಂತ್ರಿಯಾಗಿ ಮುಂದುವರಿಸಲು  ಸಿಎಂ ಒಲವು ತೋರಿಸಿದ್ದಾರೆ.  ಅಧಿವೇಶನ ಮುಗಿಯುತ್ತಿದ್ದಂತೆ ಗೃಹ ಖಾತೆ  ಹಂಚಿಕೆ ಬಗ್ಗೆ ಸ್ಪಷ್ಟ  ನಿರ್ಧಾರ ಹೊರಬೀಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿದ ಲಕ್ಷ್ಮೇಶ್ವರ ಪುರಸಭೆ!
ಪರಿಷತ್‌ನಲ್ಲಿ ಮಧುಗೆ ಮೆಚ್ಚುಗೆ: 'ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ?' ಕಾಲೆಳೆದ ಸಿಟಿ ರವಿ!