
ನವದೆಹಲಿ: ಮಹಾತ್ಮಾ ಗಾಂಧೀಜಿ ಹತ್ಯೆ ನಡೆಯಬಹುದು ಎಂಬುದು ಅಮೆರಿಕ ಗೂಢಚರರಿಗೆ ಮೊದಲೇ ಗೊತ್ತಿತ್ತೇ? ಅವರು ಗಾಂಧೀಜಿಯವರ ಪ್ರಾಣ ರಕ್ಷಣೆಗೆ ಯತ್ನಿಸಿದ್ದರೇ? ಇಂಥ ಒಂದು ಪ್ರಶ್ನೆ ಈಗ ಎದುರಾಗಿದ್ದು, ಅಮೆರಿಕದಲ್ಲಿರುವ ಈ ಕುರಿತ ಟೆಲಿಗ್ರಾಂ ದಾಖಲೆಯೊಂದನ್ನು ಬಹಿರಂಗಪಡಿಸಬೇಕು. ಈ ಮೂಲಕ ಗಾಂಧೀಜಿ ಸಾವಿನ ಮರುತನಿಖೆ ನಡೆಸಬೇಕು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಮುಂಬೈನ ಅಭಿನವ ಭಾರತ ಎಂಬ ಸಂಸ್ಥೆಯ ಟ್ರಸ್ಟಿಯೂ ಆದ ಸಂಶೋಧಕ ಡಾ| ಪಂಕಜ್ ಫಡ್ನಿಸ್ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ಮಹಾತ್ಮಾ ಅವರ ಹತ್ಯೆ ನಡೆದ ಕೆಲವೇ ಹೊತ್ತಿನಲ್ಲಿ (1948, ಜ.30) ಅಮೆರಿಕ ಸರ್ಕಾರಕ್ಕೆ ದಿಲ್ಲಿಯಲ್ಲಿನ ಅಮೆರಿಕ ದೂತಾವಾಸದಿಂದ ಕೆಲವು ಟೆಲಿಗ್ರಾಂಗಳು ರವಾನೆಯಾಗಿವೆ. ಈ ಪೈಕಿ ಒಂದು ಟೆಲಿಗ್ರಾಂ ಅನ್ನು ಅಮೆರಿಕ ಗೌಪ್ಯವಾಗಿಟ್ಟಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಇದನ್ನು ಬಹಿರಂಗಪಡಿಸಬೇಕು ಎಂದು ಭಾರತ ಸರ್ಕಾರಕ್ಕೆ ಸೂಚಿಸುವಂತೆ ಡಾ| ಫಡ್ನಿಸ್ ಅವರು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.