ಚುನಾವಣೆ ಹತ್ತಿರವಾಗ್ತಾ ಇದ್ದಂತೆ ರಾಹುಲ್ ಗಾಂಧಿ ಟೆಂಪಲ್ ರನ್ ಆಯ್ತು ಈಗ ಸಿಎಂ ಸರದಿ: ದೇವಸ್ಥಾನಕ್ಕೆ ಎಡತಾಕಲು ಶುರು ಮಾಡಿದ್ರಾ ಸಿಎಂ?

Published : Mar 29, 2018, 03:23 PM ISTUpdated : Apr 11, 2018, 12:43 PM IST
ಚುನಾವಣೆ ಹತ್ತಿರವಾಗ್ತಾ ಇದ್ದಂತೆ ರಾಹುಲ್ ಗಾಂಧಿ ಟೆಂಪಲ್ ರನ್ ಆಯ್ತು ಈಗ ಸಿಎಂ ಸರದಿ: ದೇವಸ್ಥಾನಕ್ಕೆ ಎಡತಾಕಲು ಶುರು ಮಾಡಿದ್ರಾ ಸಿಎಂ?

ಸಾರಾಂಶ

ಚುನಾವಣೆ ಹತ್ತಿರವಾಗುತ್ತಿದ್ದಂತೆ  ರಾಹುಲ್ ಗಾಂಧಿ ಟೆಂಪಲ್ ರನ್ ಆಯ್ತು  ಈಗ ಸಿಎಂ ಸಿದ್ದರಾಮಯ್ಯ  ತವರಿನಲ್ಲಿ ಟೆಂಪಲ್ ರನ್ ಮಾಡಿದ್ದಾರೆ. 

ಮೈಸೂರು (ಮಾ. 29): ಚುನಾವಣೆ ಹತ್ತಿರವಾಗುತ್ತಿದ್ದಂತೆ  ರಾಹುಲ್ ಗಾಂಧಿ ಟೆಂಪಲ್ ರನ್ ಆಯ್ತು  ಈಗ ಸಿಎಂ ಸಿದ್ದರಾಮಯ್ಯ  ತವರಿನಲ್ಲಿ ಟೆಂಪಲ್ ರನ್ ಮಾಡಿದ್ದಾರೆ. 

ಚಾಮುಂಡೇಶ್ವರಿ ಕ್ಷೇತ್ರದಿಂದ ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.  ಚಾಮುಂಡೇಶ್ವರಿ ಕ್ಷೇತ್ರದ ರಮ್ಮನಹಳ್ಳಿ ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.  ಒಂದೇ ಗ್ರಾಮದ ಮೂರು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಮೂರು ದೇವಾಲಯಗಳಲ್ಲೂ ಪೂಜೆ ಸಲ್ಲಿಸಿದ್ದಾರೆ.

ಹಣೆಗೆ ಆರತಿ ತಿಲಕ ಹಾಗೂ ಕುಂಕುಮ ಇಟ್ಟುಕೊಂಡಿದ್ದಾರೆ.  ಮಂಗಳಾರತಿ ಹಾಗೂ ಆರತಿ ತಟ್ಟೆಗೆ 500 ರೂ ದುಡ್ಡು ಹಾಕಿದರು.  ಈ ವೇಳೆ  ಸಿಎಂ ಕೈಯಲ್ಲಿ  ಸ್ಥಳೀಯರು ಬಲವಂತವಾಗಿ ಗಂಟೆ ಹೊಡೆಸಿದ್ದಾರೆ.  ಗಂಟೆ ಹೊಡೆಯಲು ಹೋಗುವ ವೇಳೆ ಜಾರಿ ಬೀಳುವುದಕ್ಕಾದರು.  ತಕ್ಷಣ ಸಿಎಂರನ್ನ  ಅಲ್ಲಿದ್ದವರು ಹಿಡಿದುಕೊಂಡರು. 

ಪುತ್ರ ಯತೀಂದ್ರ ಜೊತೆ ಗ್ರಾಮದ ಬೀದಿ ಬೀದಿಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ ಸಿಎಂ ಸಿದ್ದರಾಮಯ್ಯ.  ಸಿಎಂ ಹಾಗೂ ಯತೀಂದ್ರ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿತ್ರದುರ್ಗ ಬಸ್ ದುರಂತ: ಮೃತರಿಗೆ ₹2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ; ವರದಿ ಕೇಳಿದ ರಾಮಲಿಂಗಾರೆಡ್ಡಿ
ಬಿಕ್ಲು ಶಿವ ಹ*ತ್ಯೆಗೆ 12 ಗುಂಟೆ ಜಾಗ ಕಾರಣ: ಸಿಐಡಿ ತನಿಖೆಯಲ್ಲಿ ಬಯಲು