ಗೌಡರ ಬಗ್ಗೆ ಮಾತನಾಡಿದ್ದ ಬಸವರಾಜುಗೆ HDK ಗುದ್ದು

By Web DeskFirst Published Jun 7, 2019, 4:53 PM IST
Highlights

ತುಮಕೂರಿನಲ್ಲಿ ಲೋಕಸಮರದ ಕಾವು ಮುಗಿದಿದೆ. ಆದರೆ ಎರಡು ಪಕ್ಷದ ನಾಯಕರ ನಡುವೆ ಮಾತಿನ ಸಮರ ಮಾತ್ರ ನಿಂತಿಲ್ಲ.

ಬೆಂಗಳೂರು(ಜೂ. 07) ತುಮಕೂರು ಸಂಸದ ಜಿ.ಎಸ್. ಬಸವರಾಜು ವಿರುದ್ಧ ಸಿಎಂ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಹೇಮಾವತಿಗೆ ಕಮಿಟಿಯವರೇ ಒದ್ದು ನೀರು ಬಿಡಿಸುತ್ತಾರೆ ಎಂಬ ಹೇಳಿಕೆಗೆ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ.

ದೇವೇಗೌಡರ ಬಗ್ಗೆ ಲಘುವಾಗಿ ಟೀಕೆ ಮಾಡಬೇಡಿ. ಈ ರೀತಿ ಮಾತನಾಡಿದರೆ ಮಾತನಾಡಿದರೆ ಶ್ರೇಯಸ್ಸಲ್ಲ ರಾಜ್ಯದ ನೀರಾವರಿಗೆ ಹೋರಾಟ ಮಾಡಿದ ದೇವೇಗೌಡರಿಗೆ ಅವಮಾನ ಮಾಡಬೇಡಿ. ರಾಜ್ಯದ ರೈತನಿಗೆ ಶಕ್ತಿ ಕೊಟ್ಟು  ನೀರಾವರಿ ಸೌಲಭ್ಯ ಕಲ್ಪಿಸಿದವರು ದೇವೇಗೌಡರು ಎಂಬುದನ್ನು ಮರೆಯಬೇಡಿ ಎಂದರು.

ಒಟ್ಟಿನಲ್ಲಿ ತುಮಕೂರಿನ ವಿಚಾರ ಮತ್ತೆ ರಾಜಕಾರಣದಲ್ಲಿ ಚಚ್ಚ ಹುಟಟ್ಟುಹಾಕಿದೆ. ನಾಯಕರ ನಡುವಿನ ಹೇಳಿಕೆಗಳಲ್ಲಿ ತುಮಕೂರು ಮತ್ತು ಹಾಸನದ ಜನ ಪರಿತಪಿಸುವುದು ಮಾತ್ರ ತಪ್ಪಿಲ್ಲ.

click me!