ಸಾಲಗಾರರ ವಶದಲ್ಲಿದ್ದ ಕೊಳಗೇರಿ ಮಹಿಳೆ ಮನೆ ಬಿಡಿಸಿಕೊಟ್ಟ ಸಿಎಂ

Published : Sep 06, 2018, 11:38 AM ISTUpdated : Sep 09, 2018, 09:29 PM IST
ಸಾಲಗಾರರ ವಶದಲ್ಲಿದ್ದ ಕೊಳಗೇರಿ ಮಹಿಳೆ ಮನೆ ಬಿಡಿಸಿಕೊಟ್ಟ ಸಿಎಂ

ಸಾರಾಂಶ

ಕೊಳಗೇರಿ ಮಹಿಳೆಯೊಬ್ಬರ ಸಾಲದ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿದ್ದಾರೆ. ಗಿರಿನಗರದ ಚಾಮುಂಡಿ ಕೊಳಗೇರಿ ನಿವಾಸಿ ಕನ್ನಿಯಮ್ಮ ಎಂಬುವರೇ ಸಮಸ್ಯೆ ಮುಕ್ತರಾಗಿದ್ದು, ಅವರಿಂದ ಸಾಲಗಾ ರರು ವಶಡಿಸಿಕೊಂಡಿದ್ದ ಮನೆಯನ್ನು ಪೊಲೀಸರು ಬಿಡಿಸಿ ಕೊಟ್ಟಿದ್ದಾರೆ. 

ಬೆಂಗಳೂರು: ತಮಗೆ ಜನತಾ ದರ್ಶನದಲ್ಲಿ ಅಹವಾಲು ಸಲ್ಲಿಸಿದ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಫ್ಲ್ಯಾಟ್ ವಿವಾದ ಬಗೆಹರಿಸಿದ ಬೆನ್ನಲೆ ಮುಖ್ಯಮಂತ್ರಿಗಳು, ಇದೀಗ ಕೊಳಗೇರಿ ಮಹಿಳೆಯೊಬ್ಬರ ಸಾಲದ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿದ್ದಾರೆ. ಗಿರಿನಗರದ ಚಾಮುಂಡಿ ಕೊಳಗೇರಿ ನಿವಾಸಿ ಕನ್ನಿಯಮ್ಮ ಎಂಬುವರೇ ಸಮಸ್ಯೆ ಮುಕ್ತರಾಗಿದ್ದು, ಅವರಿಂದ ಸಾಲಗಾ ರರು ವಶಡಿಸಿಕೊಂಡಿದ್ದ ಮನೆಯನ್ನು ಪೊಲೀಸರು ಬಿಡಿಸಿ ಕೊಟ್ಟಿದ್ದಾರೆ. 

ಬುಧವಾರ ತಮ್ಮ ಗೃಹ ಕಚೇರಿಯಲ್ಲಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕನ್ನಿಯಮ್ಮ ಅವರಿಗೆ ಮನೆ ದಾಖಲೆ ಪತ್ರಗಳನ್ನು ಕುಮಾರಸ್ವಾಮಿ ಹಸ್ತಾಂತರಿಸಿದರು. ಕೆಲ ತಿಂಗಳ ಹಿಂದೆ ಗಿರಿನಗರದ ಈಶ್ವರ್ ಎಂಬುವರಿಂದ 1.75 ಲಕ್ಷ ಸಾಲವನ್ನು ಕನ್ನಿಯಮ್ಮ ಪತಿ ನಾಗರಾಜು ಪಡೆದಿದ್ದರು. ಮನೆಗೆಲಸ ಮಾಡುವ ಕನ್ನಿಯಮ್ಮ, ತಾವು ಕಷ್ಟಪಟ್ಟ ದುಡಿದು ಸಾಲಗಾರರಿಗೆ ಹಣ ಮರಳಿಸಿದ್ದರು. ಆದರೆ ತನಗೆ ಸಕಾಲಕ್ಕೆ ಸಾಲ ಮರಳಿಸಲಿಲ್ಲ ಎಂದು ಹೇಳಿ ಕನ್ನಿಯಮ್ಮ ದಂಪತಿ ಮೇಲೆ ಗಲಾಟೆ ಮಾಡಿದ್ದಈಶ್ವರ್, ಆ ಕುಟುಂಬವನ್ನು ಮನೆಯಿಂದ ಹೊರದಬ್ಬಿದ್ದ.

ಬಳಿಕ ಕನ್ನಿಯಮ್ಮ ಮನೆಯನ್ನು ಮತ್ತೊಬ್ಬರಿಗೆ ಆತ ಬಾಡಿಗೆ ಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಸೆ. 1 ರಂದು ಜನತಾ ದರ್ಶನದಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರಿಗೆ ಕನ್ನಿಯಮ್ಮ ಅಹವಾಲು ಸಲ್ಲಿಸಿದ್ದರು. ಈ ಮನವಿಗೆ ಕೂಡಲೇ ಸ್ಪಂದಿಸಿದ ಮುಖ್ಯ
ಮಂತ್ರಿಗಳು, ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಅವರಿಗೆ ಕರೆ ಮಾಡಿ ಕನ್ನಿಯಮ್ಮಳಿಗೆ ರಕ್ಷಣೆ ಕಲ್ಪಿಸುವಂತೆ ಸೂಚಿಸಿದರು. ಅಲ್ಲದೆ, ತಕ್ಷಣವೇ ಫೈನಾಶ್ಷಿಯರ್ ವಶಕ್ಕೆ ಪಡೆದಿರುವ ಮನೆಯನ್ನು ಮರಳಿ ದೂರುದಾರರಿಗೆ ಕೊಡಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶಿಸಿದ್ದರು. ಈ ಸೂಚನೆ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಈಶ್ವರ್ ಅವರನ್ನು ಗಿರಿನಗರ ಠಾಣೆಗೆ ಕರೆಸಿ ಕನ್ನಿಯಮ್ಮ ಸಾಲದ ಕುರಿತು ವಿಚಾರಿಸಿದರು. ಆಗ ತನಗೆ ಸಾಲ ಮರಳಿಸದ ಕಾರಣಕ್ಕೆ ಮನೆಗೆ ಬೀಗ ಹಾಕಿರುವುದಾಗಿ ಆತ ಹೇಳಿದ.

 ಆಗ ಪೊಲೀಸರು, ಕನ್ನಿಯಮ್ಮ ಅವರಿಗೆ ಮನೆ ಮರಳಿಸಬೇಕು ಹಾಗೂ ಸಾಲದ ವಿಚಾರದಲ್ಲಿ ತೊಂದರೆ ಕೊಡಬಾರದು ಎಂದು ತಾಕೀತು ಮಾಡಿದ್ದರು. ಇದೇ ಜನತಾ ದರ್ಶನದಲ್ಲಿ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ವಂದನಾ ಅವರು, ವಿಕೆಸಿ ರಿಯಲ್ ಎಸ್ಟೇಟ್ ಸಂಸ್ಥೆ ವಿರುದ್ಧ ಹಣ ಪಡೆದು ಫ್ಲ್ಯಾಟ್ ನೋಂದಣಿ ಮಾಡಿಸಿಕೊಡದೆ ತೊಂದರೆ ಕೊಡುತ್ತಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ಕೊಟ್ಟಿದ್ದರು. ಈ ದೂರಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, 24 ತಾಸಿನಲ್ಲಿ ವಂದನಾ ಹೆಸರಿಗೆ ಫ್ಲ್ಯಾಟ್ ನೋಂದಣಿ ಆಗುವಂತೆ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!
ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!