
ಬೆಂಗಳೂರು(ಸೆ.23): ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ವಿರುದ್ಧ ಏಕವಚನದಲ್ಲೇ ಸಿಎಂ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ರಾಜ್ಯದ ಢೋಂಗಿ ರಾಜಕಾರಣಿ. ಯಡಿಯೂರಪ್ಪ ನೀನೇ ಜೈಲಿಗೆ ಹೋಗಿ ಬಂದಿದ್ದೀಯಾ, ನೀನೇ ಕಷ್ಟದಲ್ಲಿಯಾ ? ನಮ್ಮ ವಿರುದ್ಧ ಚಾರ್ಜ್ ಸೀಟ್ ಹಾಕೋಕೆ ಆಗುತ್ತಾ ಎಂದು ಸಿಎಂ ಸಾವಾಲೆಸೆದರು. ಇನ್ನೂ ಮೋದಿ- ಬಿಜೆಪಿ ನಾಯಕರನ್ನೂ ಸಿಎಂ ಕೆಣಕಿದರು. ಮೋದಿ ಅವರದ್ದು ಕೇವಲ ಮನ್ ಕೀ ಬಾತ್, ಕಾಂಗ್ರೆಸ್'ನದ್ದು ಕಾಮ್ ಕೀ ಬಾತ್. ವಿಮಾನದಲ್ಲಿ ಸುತ್ತೋದು ಬಿಟ್ರೆ ಮೋದಿ ಇನ್ನೇನು ಮಾಡಿಲ್ಲ. ಸಾಲಮನ್ನಾ ಬಗ್ಗೆ ಮೋದಿ ಎದುರು ಮಾತನಾಡಲು ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ್, ಶೆಟ್ಟರ್ ಸೇರಿದಂತೆ ಯಾರಿಗೂ ಮೀಟರ್ ಇಲ್ಲ ಎಂದು ಸಿಎಂ ಛೇಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.