
ಚಿತ್ರದುರ್ಗ: ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಸ್ವತಃ ಜಿಲ್ಲಾಧಿಕಾರಿ ವಿಜಯ ರೆಡ್ಡಿ ಜ್ಯೋತ್ಸ್ನಾ ತಮ್ಮ ಕಾರಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ಕಲ್ಪಿಸಿ, ಎಲ್ಲರಿಗೂ ಮಾದರಿ ಎನಿಸಿದ್ದಾರೆ.
ನಗರದ ಹಳೇ ವೈಶಾಲಿ ಆಸ್ಪತ್ರೆ ಬಳಿ ಶುಕ್ರವಾರ ಸಂಜೆ ಆಟೋವೊಂದು ಪಲ್ಟಿಯಾಗಿ ನಗರದ ಆಂಜನೇಯಸ್ವಾಮಿ ಬಡಾವಣೆಯ ವಿದ್ಯಾರ್ಥಿ ಅಸ್ಲಂ ಪಾಷಾ (11) ಎಂಬುವನಿಗೆ ತೀವ್ರ ಗಾಯಗಳಾಗಿದ್ದವು.
ಅದೇ ಮಾರ್ಗದಲ್ಲಿ ಬರುತ್ತಿದ್ದ ಜಿಲ್ಲಾಧಿಕಾರಿ ವಿಜಯರೆಡ್ಡಿ ಅವರು ತಕ್ಷಣವೇ ಕಾರು ನಿಲ್ಲಿಸಿ ಗಾಯಾಳು ಬಾಲಕನನ್ನು ಕಾರಿನಲ್ಲಿ ಕರೆ ತಂದು ಆಸ್ಪತ್ರೆಗೆ ಸೇರಿಸಿದ್ದಾರೆ.
ಜಿಲ್ಲಾಧಿಕಾರಿ ಆಗಮಿಸಿದ್ದನ್ನು ಕಂಡು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್ ಸೇರಿದಂತೆ ತಜ್ಞ ವೈದ್ಯರು ತಕ್ಷಣವೇ ವಾರ್ಡ್ಗೆ ಆಗಮಿಸಿ ಗಾಯಾಳು ಅಸ್ಲಂ ಪಾಷಾನಿಗೆ ಚಿಕಿತ್ಸೆ ನೀಡಿದ್ದಾರೆ.
ಪೋಷಕರು ಬರು ವರೆಗೂ ಬಾಲಕನ ಬಳಿಯೇ ಇದ್ದ ಜಿಲ್ಲಾಧಿಕಾರಿ, ಪೋಷಕರ ಆಗಮನದ ಬಳಿಕ ಅಲ್ಲಿಂದ ಕಚೇರಿಗೆ ತೆರಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.