
ಚೆನ್ನೈ(ಜ.02): ಜಯಲಲಿತಾ ಆಪ್ತೆ ಶಶಿಕಲಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಚಿನ್ನಮ್ಮನಿಗೆ ಸಿಎಂ ಗಾದಿ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಅಣ್ಣಾಡಿಎಂಕೆಯ ಹಿರಿಯ ಮುಯಖಂಡ ಮತ್ತು ಲೋಕಸಭೆಯ ಉಪಾಧ್ಯಕ್ಷ ತಂಬಿ ದೊರೈ ಶಶಿಕಲಾ ಸಿಎಂ ಸ್ಥಾನಕ್ಕೇರಬೇಕೆಂದು ಒತ್ತಾಯಿಸಿದ್ಧಾರೆ.
`ಗೌರವಾನ್ವಿತ ಚಿನ್ನಮ್ಮ(ಶಶಿಕಲಾ) ಸಿಎಂ ಗಾದಿಗೆ ಬೇಕಾದ ಬುದ್ದಿವಂತಿಕೆ, ಸಾಮರ್ಥ್ಯ ಮತ್ತು ಜನಾನುರಾಗಿಯಾಗಿದ್ದಾರೆ. ಹೀಗಾಗಿ, ತಮಿಳುನಾಡು ಸಿಎಂ ಜವಾಬ್ದಾರಿಯನ್ನ ವಹಿಸಿಕೊಳ್ಳಬೇಕು. ಗೌರವಾನ್ವಿತ ಚಿನ್ನಮ್ಮ ಸಿಎಂ ಸ್ಥಾನ ಅಲಂಕರಿಸುವಂತೆ ಪಕ್ಷದ ಕಾರ್ಯಕರ್ತರ ಪರವಾಗಿ ಸವಿನಯವಾಗಿ ಪ್ರಾರ್ಥಿಸುತ್ತೇನೆ.
`ಅಮ್ಮನ ನಿಧನದ ಬಳಿಕ ಪಕ್ಷ ೇನಾಗಬಹುದೆಂದು ಕೋಟ್ಯಂತರ ಕಾರ್ಯಕರ್ತರು ಸೇರಿದಂತೆ ನಾವೆಲ್ಲರೂ ದಿಗ್ಭ್ರಮೆಗೊಳಗಾಗಿದ್ದೆವು. ಲೈಟ್ ಹೌಸ್ ರೀತಿ ಚಿನ್ನಮ್ಮ ನಮ್ಮನ್ನೆಲ್ಲ ಕಾಪಾಡಿದರು ಎಂದು ತಂಬಿದೊರೈ ಹೇಳಿದ್ಧಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.