
ಮೈಸೂರು(ಫೆ.02): ಮೈಸೂರಿನಲ್ಲಿ ಮತ್ತೊಂದು ಮಕ್ಕಳ ಮಾರಾಟ ಜಾಲ ಬಯಲಾಗಿದೆ. ಅದೂ ತನ್ನ ಹೆತ್ತ ತಾಯಿಯಿಂದಲೇ ಈ ಕೃತ್ಯ ನಡೆದಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಎಚ್.ಡಿ.ಕೋಟೆ ತಾ. ಕೈಲಾಸಪುರ, ಭೀಮನಹಳ್ಳಿಯಲ್ಲಿ 3 ವರ್ಷದ ಮತ್ತು 7 ವರ್ಷದ ಅಕ್ಕ, ತಂಗಿಯರನ್ನೇ ತಾಯಿ ಮಾರಾಟಕ್ಕಿಟ್ಟ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಮಹೇಂದ್ರ ಕುಮಾರ್ ಹಾಗೂ ಕೊಡಗು ಮೂಲದ ಮತ್ತಣ್ಣ ಎಂಬುವರಿಗೆ ಮಕ್ಕಳನ್ನು ಮಾರಿದ್ದಳು ಎನ್ನಲಾಗಿದೆ.
ಮಹಿಳಾ ಸಾಂತ್ವನ ಕೇಂದ್ರದವರಿಂದ ಸದ್ಯ ಮಕ್ಕಳನ್ನ ರಕ್ಷಿಸಲಾಗಿದೆ. ಹೆಣ್ಮಕ್ಕಳನ್ನು ಸಾಕಲಾಗದೆ ತಾಯಿ ರಂಜಿತಾ ಮಕ್ಕಳನ್ನು ಮಾರಾಟ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.