ಮೈಸೂರಿನಲ್ಲಿ ಬಿಜೆಪಿಗೆ ದೊಡ್ಡ ಶಾಕ್ :ಜಿಲ್ಲೆಯ ಪ್ರಮುಖ ನಾಯಕ ಕಾಂಗ್ರೆಸ್'ಗೆ ?

By Suvarna Web DeskFirst Published Oct 5, 2017, 4:41 PM IST
Highlights

ವಿಜಯ್ ಶಂಕರ್ ಅವರು 2014ರ ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ ಪಕ್ಷವು ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರಿಗೆ ನೀಡಿ ಇವರಿಗೆ ಹಾಸನದಿಂದ ನೀಡಲಾಗಿತ್ತು.

ಮೈಸೂರು(ಅ.05): ಜಿಲ್ಲೆಯಲ್ಲಿ ಮುಂದಿನ ಚುನಾವಣೆಗೆ ಬಿಜೆಪಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಮಾಜಿ ಸಂಸದ ವಿಜಯ್ ಶಂಕರ್ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ.

ಹಿರಿಯ ನಾಯಕರ ನಡವಳಿಕೆಯಿಂದ ವಿಜಯ್ ಶಂಕರ್ ಅಸಮಾಧಾನ'ಗೊಂಡಿದ್ದು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ.ವಿಜಯ್ ಶಂಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಾಳ ಹಾಕಿದ್ದು, ಹೆಚ್. ವಿಶ್ವನಾಥ್ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆಯಿದೆ. ವಿಜಯ್ ಶಂಕರ್ ಅವರು 2014ರ ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ ಪಕ್ಷವು ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರಿಗೆ ನೀಡಿ ಇವರಿಗೆ ಹಾಸನದಿಂದ ನೀಡಲಾಗಿತ್ತು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಎದುರು ಸ್ಪರ್ಧಿಸಿ ವಿಜಯ್ ಶಂಕರ್ ಸೋತಿದ್ದರು.

(ಸಂಗ್ರಹ ಚಿತ್ರ)

click me!