ಹಣಕಾಸು ವರ್ಷ ಬದಲು ಯೋಜನೆ ಕೈಬಿಟ್ಟ ಕೇಂದ್ರ

Published : Aug 30, 2017, 01:35 PM ISTUpdated : Apr 11, 2018, 01:02 PM IST
ಹಣಕಾಸು ವರ್ಷ ಬದಲು ಯೋಜನೆ ಕೈಬಿಟ್ಟ ಕೇಂದ್ರ

ಸಾರಾಂಶ

ಹಣಕಾಸು ವರ್ಷವನ್ನು ಏಪ್ರಿಲ್- ಮಾರ್ಚ್ ಬದಲಾಗಿ ಜನವರಿ-ಡಿಸೆಂಬರ್‘ಗೆ ಬದಲಾಯಿಸುವ ಪ್ರಸ್ತಾವಿತ ಯೋಜನೆಯನ್ನು ಕೇಂದ್ರ ಸರ್ಕಾರ ಸದ್ಯಕ್ಕೆ ಕೈಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ  ಅವಧಿಯಲ್ಲಿ ಅದು ಜಾರಿಗೊಳ್ಳುವ ಸಾಧ್ಯತೆ ವಿರಳವಾಗಿದೆ ಎಂದು ಮೂಲಗಳು ಹೇಳಿವೆ.

ನವದೆಹಲಿ: ಹಣಕಾಸು ವರ್ಷವನ್ನು ಏಪ್ರಿಲ್- ಮಾರ್ಚ್ ಬದಲಾಗಿ ಜನವರಿ-ಡಿಸೆಂಬರ್‘ಗೆ ಬದಲಾಯಿಸುವ ಪ್ರಸ್ತಾವಿತ ಯೋಜನೆಯನ್ನು ಕೇಂದ್ರ ಸರ್ಕಾರ ಸದ್ಯಕ್ಕೆ ಕೈಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ  ಅವಧಿಯಲ್ಲಿ ಅದು ಜಾರಿಗೊಳ್ಳುವ ಸಾಧ್ಯತೆ ವಿರಳವಾಗಿದೆ ಎಂದು ಮೂಲಗಳು ಹೇಳಿವೆ.

ಹಣಕಾಸು ವರ್ಷ ಬದಲಾವಣೆಗೆ ಎಲ್ಲ ರಾಜ್ಯಗಳ ಸಮ್ಮತಿ ಬೇಕು. ಆದರೆ ಬಹುತೇಕ ರಾಜ್ಯಗಳು ಪ್ರಸ್ತುತ ವ್ಯವಸ್ಥೆಯ ಬಗ್ಗೆಯೇ ಒಲವು ಹೊಂದಿದೆ. ಅಲ್ಲದೇ, ಜನವರಿ-ಡಿಸೆಂಬರ್ ಹಣಕಾಸು ವರ್ಷ ವ್ಯವಸ್ಥೆಯಿಂದ ಹೆಚ್ಚಿನ ಪ್ರಯೋಜನಗಳು ಸರ್ಕಾರಕ್ಕೆ ಗೋಚರಿಸಿಲ್ಲ. ಹೀಗಾಗಿ ತುರ್ತಾಗಿ ಯೋಜನೆ ಜಾರಿಗೊಳಿಸಿ ಗೊಂದಲ ಮಾಡುವುದಕ್ಕಿಂತ ತಕ್ಷಣಕ್ಕೆ ಪ್ರಸ್ತಾಪ ಬದಿಗೆ ಸರಿಸುವುದು ಒಳಿತು ಎಂಬ ನಿರ್ಧಾರಕ್ಕೆ  ಸರ್ಕಾರ ಬಂದಿದೆ ಎನ್ನಲಾಗಿದೆ.

ಮಧ್ಯಪ್ರದೇಶ  ಈ ವ್ಯವಸ್ಥೆಯನ್ನು ಜಾರಿಗೊಳಿಸಿದ ಪ್ರಥಮ ರಾಜ್ಯವಾಗಿದೆ. ಕೇಂದ್ರದಲ್ಲೂ ಇದೇ ವ್ಯವಸ್ಥೆ ಜಾರಿಗೊಳಿಸಲು ಚಿಂತಿಸಿರುವುದಾಗಿ ಹಣಕಾಸು ಸಚವ ಅರುಣ್ ಜೇಟ್ಲಿ ಈ ಹಿಂದೆ ಲೋಕಸಭೆಯಲ್ಲಿ ಪ್ರಕಟಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದ 2ನೇ ರಾಜಧಾನಿ ಬೆಳಗಾವಿಗೆ ಉತ್ತಮ ಭವಿಷ್ಯ: ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಲೋಕಸಭೆಯಲ್ಲಿ 2 ರೈತಪರ ಮಸೂದೆ ಮಂಡನೆ: ಸಂಸದ ಡಾ.ಕೆ.ಸುಧಾಕರ್