ಅವಳನ್ನು ಬಿಟ್ಟಿರಲಾಗದ ಪ್ರೇಮ ಇವಳಿಗೆ; ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸಲಿಂಗ ಪ್ರೇಮ

Published : Jan 17, 2018, 07:52 PM ISTUpdated : Apr 11, 2018, 12:41 PM IST
ಅವಳನ್ನು ಬಿಟ್ಟಿರಲಾಗದ ಪ್ರೇಮ ಇವಳಿಗೆ; ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸಲಿಂಗ ಪ್ರೇಮ

ಸಾರಾಂಶ

ಈ ಪ್ರಕರಣಕ್ಕೆ ಹೊರ ಟ್ವಿಸ್ಟ್ ಸಿಕ್ಕಿದ್ದು, ಮಹರಾಷ್ಟ್ರದ ಯುವತಿ, ಮೆಹಕ್ 18 ವರ್ಷವಾಗುವವರೆಗೂ ಕಾದು ಆಕೆಯನ್ನು ಹುಡುಕಿಕೊಂಡು ಕಳೆದ 3 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದಾಳೆ. ಮೆಹಕ್ ಮನೆಗೆ ಬಂದಾಗ ಅವರ ಪೋಷಕರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಮಹರಾಷ್ಟ್ರ ಮೂಲದ ರೂಪಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಬೆಂಗಳೂರು(ಜ.17): ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸಲಿಂಗ ಪ್ರೇಮ ಪ್ರಕರಣ ಬಯಲಿಗೆ ಬಂದಿದ್ದು, ಮಹರಾಷ್ಟ ಮತ್ತು ಬೆಂಗಳೂರು ಯುವತಿಯರ ನಡುವೆ ಪ್ರೇಮಕಹಾನಿ ನಡೆದಿದೆ. ಫೇಸ್'ಬುಕ್ ಮೂಲಕ ಪರಿಚಿತವಾದ ಈ ಜೋಡಿಗೆ ಪೋಷಕರು ಅಡ್ಡಿಯಾಗಿದ್ದಾರೆ.

ಒಂದು ವರ್ಷದಿಂದ ಫೇಸ್'ಬುಕ್'ನಲ್ಲಿ ಪರಿಚಯವಾಗಿದ್ದ ಇಬ್ಬರು ಯುವತಿಯರು. ಆ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಈ ವಿಷಯ ತಿಳಿದ ಬೆಂಗಳೂರು ಮೂಲದ ಯುವತಿ ಮೆಹಕ್ ಶರೀಫ್'ಳ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪೋಷಕರ ವಿರೋಧದ ನಡುವೆಯೇ ಮೆಹಕ್ ಶರೀಫ್ ಮಹರಾಷ್ಟ್ರಗೆ ಹೋಗಿದ್ದಳು. ಈ ಕುರಿತಂತೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ಮೆಹಕ್(17 ವರ್ಷ) ಅಪ್ರಾಪ್ತೆಯಾದ ಹಿನ್ನಲೆಯಲ್ಲಿ ಆಕೆಯ ಮನವೊಲಿಸಿ ಮಹರಾಷ್ಟ್ರದಿಂದ ಕೆಲ ತಿಂಗಳ ಹಿಂದಷ್ಟೇ ಪೊಲೀಸರು ಕರೆತಂದಿದ್ದರು.

ಆದರೆ ಈ ಪ್ರಕರಣಕ್ಕೆ ಹೊರ ಟ್ವಿಸ್ಟ್ ಸಿಕ್ಕಿದ್ದು, ಮಹರಾಷ್ಟ್ರದ ಯುವತಿ, ಮೆಹಕ್ 18 ವರ್ಷವಾಗುವವರೆಗೂ ಕಾದು ಆಕೆಯನ್ನು ಹುಡುಕಿಕೊಂಡು ಕಳೆದ 3 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದಾಳೆ. ಮೆಹಕ್ ಮನೆಗೆ ಬಂದಾಗ ಅವರ ಪೋಷಕರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಮಹರಾಷ್ಟ್ರ ಮೂಲದ ರೂಪಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆ ಬಳಿ ಕೋರಮಂಗಲ ಪೊಲೀಸರು ಯುವತಿಯ ಪೋಷಕರೊಂದಿಗೆ ರಾಜಿ ಮಾಡಿ ಕಳಿಸಿದ್ದಾರೆ. ಆದರೆ ಪೋಷಕರೊಂದಿಗೆ ಮನೆಗೆ ತೆರಳಲು ಒಪ್ಪದ ಮೆಹಕ್ ಪೋಷಕರ ವಿರೋಧದ ನಡುವೆಯೂ ಸಲಿಂಗ ಜೋಡಿ ಪರಾರಿಯಾಗಿದ್ದಾರೆ.

ಈ ಘಟನೆಯಿಂದ ಮೆಹಕ್ ಪೋಷಕರು ಶಾಕ್'ಗೆ ಒಳಗಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಹೂದಿಗಳ 'ಬೆಳಕಿನ ಹಬ್ಬ'ದಂದೇ ಭಯೋತ್ಪಾದಕ ದಾಳಿ! ಹನುಕ್ಕಾ ಫೆಸ್ಟಿವಲ್ ಮಹತ್ವ, ಇತಿಹಾಸ ತಿಳಿಯಿರಿ
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!