ಚಲಿಸುತ್ತಿದ್ದ ಬಸ್ನಿಂದ ನದಿಗೆ ಹಾರಿ ಕಂಡಕ್ಟರ್ ಆತ್ಮಹತ್ಯೆ

Published : Sep 25, 2016, 08:47 AM ISTUpdated : Apr 11, 2018, 12:42 PM IST
ಚಲಿಸುತ್ತಿದ್ದ ಬಸ್ನಿಂದ ನದಿಗೆ ಹಾರಿ ಕಂಡಕ್ಟರ್ ಆತ್ಮಹತ್ಯೆ

ಸಾರಾಂಶ

ಮಂಗಳೂರು(ಸೆ.25): ಪ್ರಯಾಣಿಕ ಮಾಡಿದ ಆರೋಪದಿಂದ ನೊಂದ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಚಲಿಸುತ್ತಿದ್ದ ಬಸ್‌ನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂಥ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.

ದೇವದಾಸ್ ಶೆಟ್ಟಿ ಆತ್ಮಹತ್ಯೆಗೆ ಶರಣಾದ ನಿರ್ವಾಹಕ, ಕೆಎಸ್​ಆರ್​ಟಿಸಿ ಮಂಗಳೂರು ಡಿಪೋ 1ರ ಬಸ್‌'ನಲ್ಲಿ ಕಂಡಕ್ಟರ್ ಆಗಿದ್ದ ದೇವದಾಸ್ ಎಂದಿನಂತೆ ಇವತ್ತು ಕಾರ್ಯ ಆರಂಭಿಸಿದ್ದಾರೆ. ಆದರೆ ಬೆಳಗ್ಗೆ ಚಿಲ್ಲರೆ ವಿಚಾರಕ್ಕೆ ಪ್ರಯಾಣಿಕರೊಬ್ಬರು, ನಿರ್ವಾಹಕ ದೇವದಾಸ್ ಜೊತೆ ಜಗಳ ಮಾಡಿದ್ದಾರೆ.  ತಾನು 500 ರೂಪಾಯಿ ಕೊಟ್ಟಿರುವುದಾಗಿ ಪ್ರಯಾಣಿಕ ವಾದಿಸಿದ್ದಾನೆ. ಇದಕ್ಕೆ ನಿರ್ವಾಹಕ ದೇವಸಾದ್ ಇಲ್ಲ ನೀವು ಕೊಟ್ಟಿರುವುದು 100 ರೂ. ಎಂದು ಹೇಳಿದ್ದಾರೆ. ಆದರೆ ಪ್ರಯಾಣಿಕ ನೀನು 500 ರೂ. ಪಡೆದು ಸುಳ್ಳು ಹೇಳುತ್ತಿದ್ದೀಯ ಎಂದು ಆರೋಪಿಸಿದ್ದಾರೆ.

ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಅತಿರೇಕಕ್ಕೇರಿದೆ. ಇದಾದ ಬಳಿಕ ಕಡಬ ಠಾಣೆ ಪೊಲೀಸರು ಪ್ರಯಾಣಿಕ- ಕಂಡಕ್ಟರ್ ಜತೆ ಸಂಧಾನ ಮಾಡಿ ಕಳುಹಿಸಿದ್ದಾರೆ. ಆದರೆ ಪ್ರಯಾಣಿಕನ ಆರೋಪದಿಂದ ನೊಂದ ನಿರ್ವಾಹಕ ಬಸ್ ಸುಬ್ರಹ್ಮಣ್ಯ ಬಳಿ ಬರುತ್ತಿದ್ದಂತೆ ಕುಮಾರಧಾರ ನದಿಗೆ ಹಾರಿದ್ದಾರೆ.  ದೇವದಾಸ್ ಶವಕ್ಕಾಗಿ ಕುಮಾರಧಾರಾ ನದಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ..

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು