2018ರ ಕೇಂದ್ರ ಸರ್ಕಾರದ ಬಜೆಟ್: ವೇತನದಾರ ತೆರಿಗೆದಾರರು ನಿರೀಕ್ಷಿಸುವ 5 ಪ್ರಮುಖ ಅಂಶಗಳು

Published : Jan 30, 2018, 05:14 PM ISTUpdated : Apr 11, 2018, 12:44 PM IST
2018ರ ಕೇಂದ್ರ ಸರ್ಕಾರದ ಬಜೆಟ್: ವೇತನದಾರ ತೆರಿಗೆದಾರರು ನಿರೀಕ್ಷಿಸುವ 5 ಪ್ರಮುಖ ಅಂಶಗಳು

ಸಾರಾಂಶ

ಆಯವ್ಯಯದಲ್ಲಿ ಪ್ರತಿಯೊಬ್ಬರಿಗೂ ನಿರೀಕ್ಷೆಯಿರುತ್ತದೆ. ಆದರೆ ವೇತನದಾರ ತೆರಿಗೆದಾರರಿಗೆ ಹೆಚ್ಚು ನಿರೀಕ್ಷೆಯಿರುತ್ತದೆ. ಅವರು ಆಯವ್ಯಯದಲ್ಲಿ ನಿರೀಕ್ಷಿಸುವ ಪ್ರಮುಖ 5 ಅಂಶಗಳು ಇಂತಿವೆ.

ನವದೆಹಲಿ(ಜ.30): ಕೇಂದ್ರ ಸರ್ಕಾರದ ನಾಲ್ಕನೇ ವರ್ಷದ ಬಜೆಟ್'ಅನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಫೆ.1ರಂದು ಮಂಡಿಸುತ್ತಿದ್ದು, ಇದು ಕೇಂದ್ರದ ನಿರೀಕ್ಷಿತ ಕೊನೆಯ ಬಜೆಟ್ ಎನ್ನಬಹುದು. ಮುಂದಿನ ವರ್ಷವೂ ಬಜೆಟ್ ಮಂಡಿಸಿದರೂ ಅದು ಚುನಾವಣೆ ಬಜೆಟ್ ಆಗಿರುತ್ತದೆ. ಈ ನಿಟ್ಟಿನಲ್ಲಿ ಬಜೆಟ್ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಆಯವ್ಯಯದಲ್ಲಿ ಪ್ರತಿಯೊಬ್ಬರಿಗೂ ನಿರೀಕ್ಷೆಯಿರುತ್ತದೆ. ಆದರೆ ವೇತನದಾರ ತೆರಿಗೆದಾರರಿಗೆ ಹೆಚ್ಚು ನಿರೀಕ್ಷೆಯಿರುತ್ತದೆ. ಅವರು ಆಯವ್ಯಯದಲ್ಲಿ ನಿರೀಕ್ಷಿಸುವ ಪ್ರಮುಖ 5 ಅಂಶಗಳು ಇಂತಿವೆ.

1) ತೆರಿಗೆ ವಿನಾಯಿತಿ ಮಿತಿ ಏರಿಕೆ: ತೆರಿಗೆ ವಿನಾಯಿತಿ ಮಿತಿ ಪ್ರಮುಖ ಅಂಶವಾಗಿದ್ದು, ಪ್ರತಿಯೊಬ್ಬರ ತೆರಿಗೆ ಮಿತಿಯನ್ನು ನಿರೀಕ್ಷಿಸುತ್ತಿರುತ್ತಾರೆ. ಪ್ರಸ್ತುತ ತೆರಿಗೆ ಮಿತಿಯು 2.5 ಲಕ್ಷ ರೂ.ಗಳವರೆಗಿದ್ದು ಕಳೆದ ಮೂರು ವರ್ಷಗಳಿಂದ ಬದಲಾಯಿಸಿಲ್ಲ. ಆರ್ಥಿಕ ಪರಿಣಿತರ ಅಭಿಪ್ರಾಯದಂತೆ ತೆರಿಗೆ ಮಿತಿ 5 ಲಕ್ಷಕ್ಕೆ ಏರಿಸುವ ಅಂದಾಜಿದೆ.

2) ಹೆಚ್ಚು ಭತ್ಯೆಗಳು: ಪ್ರಸ್ತುತ ಕೇಂದ್ರ ಸರ್ಕಾರದ ನೌಕರರಿಗೆ ನೀಡುತ್ತಿರುವ ಭತ್ಯೆಗಳು ಯಾವುದಕ್ಕೂ ಸಾಕಾಗುತ್ತಲ್ಲ. ಸಾರಿಗೆ ಭತ್ಯೆ ತಿಂಗಳಿಗೆ 1600 ರೂ. ಇದ್ದು, ದೀರ್ಘಾವಧಿ ಪ್ರಯಾಣದ ಸಂದರ್ಭಕ್ಕಾಗಿ 3 ಸಾವಿರಕ್ಕೆ ಏರಿಸುವ ಅನಿವಾರ್ಯತೆಯಿದೆ.  ಆದಾಯ ತೆರಿಗೆ ಕಾಯಿದೆ 10(5)ರ ಪ್ರಕಾರ  ಉದ್ಯೋಗಿ ಅಥವಾ ಆತನ ಕುಟುಂಬಸ್ಥರು ದೇಶದೊಳಗೆ ಸಂಚರಿಸಲು ವರ್ಷದಲ್ಲಿ 2 ಬಾರಿ ಎಲ್'ಟಿಎ ಪಡೆಯಬಹುದು. ಈ ಪರಿಮಿತಿಯನ್ನು ತೆಗೆದುಹಾಕಬೇಕೆಂಬುಂದು ಉದ್ಯೋಗಿಗಳ ಒತ್ತಾಯವಾಗಿದೆ.

3) ಸೆಕ್ಷನ್ 80ಸಿ ಮಿತಿ: ಪ್ರಸ್ತುತ ಸೆಕ್ಷನ್ 80ಸಿ ಕಡಿತದ ಮಿತಿ ಕಳೆದ ಹಲವಾರು ವರ್ಷಗಳಿಂದ 1.50 ಲಕ್ಷ ರೂ. ಇದೆ. ಈ ಮಿತಿಯನ್ನು 3ರಿಂದ 4 ಲಕ್ಷ ರೂ.ಗಳಿಗೆ ಏರಿಸಬೇಕಾದ ಅನಿವಾರ್ಯತೆಯಿದೆ.

4) ಬ್ಯಾಂಕ್ ಉಳಿತಾಯ ಖಾತೆಯ ಬಡ್ಡಿ: ಉಳಿತಾಯ ಖಾತೆಯ ಬಡ್ಡಿ ದರದ ಮಿತಿ 10 ಸಾವಿರ ರೂ. ಇದ್ದು, ಇದನ್ನು  ಕಳೆದ ಕೆಲವು ವರ್ಷಗಳ ಹಣದುಬ್ಬರ ದರವನ್ನು ಪರಿಗಣಿಸಿ ಹೆಚ್ಚಿಸಬೇಕಾದ ಅಗತ್ಯವಿದೆ.

5) ಪ್ರಮಾಣಿತ ಕಡಿತ ಆಯ್ಕೆ ಮರು ಪರಿಚಯ: ಸ್ವದ್ಯೋಗಿ ಹಾಗೂ ಉದ್ಯಮದಾರರಿಗೆ ಹೋಲಿಸಿದರೆ  ವೇತನದಾರ ತೆರಿಗೆದಾರರಿಗೆ ತೆರಿಗೆ ಕಡಿತ ಹೆಚ್ಚಿದೆ.ಅವರಿಗೆ ನಿರ್ದಿಷ್ಟ ಅನುಕೂಲಗಳುಳ್ಳ ಆಯ್ಕೆಗಳು ಕಡಿಮೆಯಿದೆ. ಈ ರೀತಿ ಆಯ್ಕೆಯನ್ನು 1974-75ರಲ್ಲಿ ಪರಿಚಯಿಸಲಾಗಿತ್ತು. ಇದನ್ನು 2006-07ರಲ್ಲಿ ರದ್ದುಗೊಳಿಸಲಾಗಿತ್ತು. ಪ್ರಮಾಣಿತ ಕಡಿತ ಆಯ್ಕೆ ಶುರುವಾಗುವ ನಿರೀಕ್ಷೆಯಲ್ಲಿ ವೇತನದಾರರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?