ಸಿದ್ದರಾಮಯ್ಯನವರದ್ದು ವಿನಾಶಕಾಲೇ ವಿಪರೀತ ಬುದ್ಧಿ: ಬಿಎಸ್'ವೈ ಕಿಡಿ

Published : Sep 04, 2017, 08:21 PM ISTUpdated : Apr 11, 2018, 12:39 PM IST
ಸಿದ್ದರಾಮಯ್ಯನವರದ್ದು ವಿನಾಶಕಾಲೇ ವಿಪರೀತ ಬುದ್ಧಿ: ಬಿಎಸ್'ವೈ ಕಿಡಿ

ಸಾರಾಂಶ

* ಬಿಜೆಪಿಯಿಂದ ಮಂಗಳೂರು ಚಲೋ ವಿಚಾರ * ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ * ಮಂಗಳೂರು ಚಲೋಗೆ ಯಾರ ಅಪ್ಪನ ಅಪ್ಣಣೆಯೂ ಬೇಕಾಗಿಲ್ಲ * ನಾವು ಮಂಗಳೂರು ಚಲೋ ಮಾಡಿಯೇ ಮಾಡುತ್ತೇವೆ * ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ * ರಾಜ್ಯ ಚುನಾವಣಾ ಉಸ್ತುವಾರಿಗಳ ಉಪಸ್ಥಿತಿಯಲ್ಲಿ ಸರ್ಕಾರದ ವಿರುದ್ಧ ಬಿಎಸ್​ವೈ ಕಿಡಿ

ಬೆಂಗಳೂರು(ಸೆ. 04): ಹಿಂದೂ ಮುಖಂಡರ ಹತ್ಯೆ ಖಂಡಿಸಿ ಬಿಜೆಪಿ ನಡೆಸಲಿರುವ "ಮಂಗಳೂರು ಚಲೋ" ರ್ಯಾಲಿಗೆ ಸಿಎಂ ಸಿದ್ದರಾಮಯ್ಯ ತಡೆಹಾಕುವ ಉದ್ದೇಶ ಹೊಂದಿದ್ದಾರೆನ್ನಲಾದ ಸುದ್ದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಮಂಗಳೂರು ಚಲೋ ರ್ಯಾಲಿಗೆ ಯಾರಪ್ಪನ ಅಪ್ಪಣೆಯೂ ಬೇಕಾಗಿಲ್ಲ. ನಾವು ರ್ಯಾಲಿ ಮಾಡಿದೇ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ವರ್ತಿಸುತ್ತಿದ್ದು, ತಡೆಯಲು ಮುಂದಾದ್ರೆ ಪರಿಣಾಮ ನೆಟ್ಟಗಿರೋಲ್ಲ ಎಂದು ಸರ್ಕಾರಕ್ಕೆ ಬಿಎಸ್'ವೈ ಎಚ್ಚರಿಕೆ ನೀಡಿದ್ದಾರೆ.

ರ್ಯಾಲಿ ತಡೆಯಬೇಡಿ ಎಂದ ಸಿಎಂ:
ಬಿಜೆಪಿ ನಾಯಕರು ಸೆಪ್ಟಂಬರ್ 7ರಂದು ಹಮ್ಮಿಕೊಂಡಿರುವ ಮಂಗಳೂರು ಚಲೋ ರ್ಯಾಲಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಮಂಗಳೂರು ಚಲೋ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯುವಂತೆ ನೂತನ ಗೃಹಸಚಿವ ರಾಮಲಿಂಗಾರೆಡ್ಡಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಇದೇ ವೇಳೆ ಸಚಿವರಾದ ರಮಾನಾಥ್ ರೈ ಮತ್ತು ಯು.ಟಿ.ಖಾದರ್ ಅವರು, ಹೊರಭಾಗದಿಂದ ಬರುವವರನ್ನು ಜಿಲ್ಲೆ ಪ್ರವೇಶಿಸದಂತೆ ತಡೆಯುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ 'ರ್ಯಾಲಿ ತಡೆಯೋದು ಬೇಡ. ಆದರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ. ಒಂದು ವೇಳೆ ಶಾಂತಿ ಕದಡಲು ಮುಂದಾದರೆ ಕ್ರಮ ತಗೆದುಕೊಳ್ಳಿ.. ಅಗತ್ಯ ಇರುವಷ್ಟು ಹೆಚ್ಚಿನ ತುಕಡಿಗಳನ್ನು ತರಿಸಿಕೊಳ್ಳಿ' ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಸರ್ಜಾಪುರದಲ್ಲಿ ಪುರವಂಕರ ಭರ್ಜರಿ ಹೂಡಿಕೆ, ₹1,000 ಕೋಟಿ ಮೌಲ್ಯದ ವಸತಿ ಯೋಜನೆಗೆ ಸಹಿ!
ರಾಷ್ಟ್ರಪತಿಯ ಹ್ಯಾಂಡ್​ಸಮ್​ ಅಂಗರಕ್ಷಕನಿಗೆ ಯುವತಿಯರ ಕಾಟ! ಬಾಡಿಗಾರ್ಡ್​ಗೇ ಬೇಕಿದೆ ಬಾಡಿಗಾರ್ಡ್​