ನ್ಯಾಯಾಲಯದಲ್ಲಿ ಬಾಂಬ್ : ತಪಾಸಣೆ

By Internet DeskFirst Published Sep 28, 2016, 1:54 PM IST
Highlights

ಬೆಳಗಾವಿ(ಸೆ.28): ರಾಜ್ಯ ಗುಪ್ತಚರ ಇಲಾಖೆ ಸೂಚನೆ ಮೆರೆಗೆ ಬೆಳಗಾವಿ ಜಿಲ್ಲಾ ನ್ಯಾಯಾಲಯ ಆವರಣವನ್ನು ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳ ತಂಡವು ತ್ರೀವ ಶೋಧ ನಡೆಸಿತು. ಇಂದು ಸಂಜೆ ಏಕಾಏಕಿ ಮೂರು ಶ್ವಾನಗಳ ಸೇರಿ ೧೫ ಜನ ತಂಡವು ತೀವ್ರ ಶೋಧ ನಡೆಸುತ್ತಿರುವುದನ್ನು ಗಮನಿಸಿದ ವಕೀಲರು ಮತ್ತು ಸಾರ್ವಜನಿಕರಲ್ಲಿ ಆತಂಕ ನಿರ್ಮಾಣವಾಗಿತ್ತು. ಬಾಂಬ್ ಕರೆ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂಬ ಸುದ್ದಿ ಕಾಡಕಿಚ್ಚಿನಂತೆ ಹರಡಿತು.ಆದರೆ ರಾಜ್ಯ ಗುಪ್ತಚರ ಇಲಾಖೆ ಸೂಚನೆ ಮೆರೆಗೆ ನ್ಯಾಯಾಲಯದ ಆವರಣದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಇದೇ ರೀತಿ ಬೆಳಗಾವಿ ಜಿಲ್ಲೆ ಸೇರಿ ರಾಜ್ಯದ ಎಲ್ಲ ನ್ಯಾಯಾಲಯದ ಆವರಣದಲ್ಲೂ ಮುನ್ನ ಜಾಗೃತ ಕ್ರಮವಾಗಿ ತಪಾಸಣೆ ಮಾಡಲಾಗುತ್ತಿದೆ. ಕರ್ನಾಟಕ, ತಮಿಳನಾಡು, ಆಂಧ್ರಪ್ರದೇಶದಲ್ಲೂ ತಪಾಸಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಅಮರನಾಥ ರೆಡ್ಡಿ  ಸುವರ್ಣ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದಾರೆ.

click me!