
ನವದೆಹಲಿ[ಫೆ.02]: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ಟನ್ನು ಟೀಕಿಸಲು ಹೋಗಿ ಕಾಂಗ್ರೆಸ್ ಪಕ್ಷ ಎಡವಟ್ಟು ಮಾಡಿಕೊಂಡಿದೆ. ಬಜೆಟ್ನ ನಂತರ ಟ್ವೀಟ್ ಮಾಡಿದ ಕಾಂಗ್ರೆಸ್, ‘ರೈತರಿಗೆ ನೀಡಿದ್ದ ಯಾವುದೇ ಭರವಸೆ ಈಡೇರಿಸುವಲ್ಲಿ ವಿಫಲವಾದ ಮೋದಿ ಸರ್ಕಾರ ಈಗ ಇನ್ನೊಂದು ಸುಳ್ಳು ಭರವಸೆಯೊಂದಿಗೆ ರೈತರಿಗೆ ಅವಮಾನ ಮಾಡಿದೆ’ ಎಂದು ಹೇಳಿದೆ.
ಅದರ ಕೆಳಗೊಂದು ಲೆಕ್ಕಾಚಾರದ ಗ್ರಾಫಿಕ್ಸ್ ಹಾಕಿ, ‘ಭರವಸೆ - ವರ್ಷಕ್ಕೆ 6000 ರು.’ ‘ವಾಸ್ತವ - ರೈತನಿಗೆ ತಿಂಗಳಿಗೆ ಸಿಗುವುದು 500 ರು.’ ಎಂದು ಬರೆದಿದೆ.
ಆದರೆ, ವರ್ಷಕ್ಕೆ 6000 ರು. ನೀಡಿದರೆ ತಿಂಗಳಿಗೆ ಸಿಗುವುದು 500 ರುಪಾಯಿಯೇ. ಲೆಕ್ಕಾಚಾರ ಸರಿಯಾಗಿಯೇ ಇದೆ. ಇದರಲ್ಲಿ ತಪ್ಪೇನು ಎಂದು ಟ್ವೀಟಿಗರು ಕಾಂಗ್ರೆಸ್ನ ಕಾಲೆಳೆದಿದ್ದಾರೆ.
ಬಿಜೆಪಿ ಕೂಡಾ ಈ ಟ್ವೀಟ್ಗೆ ಪ್ರತಿಕ್ರಿಯಿಸಿದ್ದು, 'ರಾಹುಲ್ ಗಾಂಧಿ IQ ಲೆವೆಲ್ 0, ನೀವು ಪಿಎಂ ಆಗಿದ್ದೀರಿ, ಪುವರ್ ಇನ್ ಮ್ಯಾಥಮ್ಯಾಟಿಕ್ಸ್' ಎಂದು ರಾಹುಲ್ ಗಾಂಧಿಯ ಕಾಲೆಳೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ