
ಬೆಳಗಾವಿ (ಜ.25): ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮೇಲೆ ಹಲ್ಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಕಾಗೆವಾಡ ಶಾಸಕ ರಾಜ ಕಾಗೆ ಪಟಾಲಂಗೆ ಜಾಮೀನು ಸಿಕ್ಕಿದೆ.
ಶಾಸಕ ರಾಜು ಕಾಗೆ ಸೇರಿ 8 ಆರೋಪಿಗಳಿಗೆ ಬೆಳಗಾವಿ ಪ್ರಧಾನ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ರಾಜು ಕಾಗೆ ಸಹೋದರ, ಪತ್ನಿ ಶೋಭಾ ಕಾಗೆ, ರಾಜು ಕಾಗೆ ಪುತ್ರಿ ತೃಪ್ತಿ ಕಾಗೆ, ಸಂಬಂಧಿಕ ಪ್ರಸಾದ್ ಸೇರಿದಂತೆ 8 ಮಂದಿಗಳಿಗೆ ಜಾಮೀನು ನೀಡಿತ್ತು.
ಜನವರಿ 1 ರಂದು ಶಾಸಕ ರಾಜುಕಾಗೆ ಪಟಾಲಂ, ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಆತನಿಗೆ ಮನಬಂದಂತೆ ಹಲ್ಲೆ ನಡೆಸಿತ್ತು.
ಪ್ರಕರಣ ಸಂಬಂಧ ದೂರು ದಾಖಲಸಿಕೊಂಡ ಪೊಲೀಸರು, ಇತ್ತೀಚೆಗಷ್ಟೆ ಆರೋಪಿಗಳನ್ನು ಬಂಧಿಸಿ, ಹಿಂಡಲಗಾ ಜೈಲಿಗಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.