
ದಾವಣಗೆರೆ (ಜ.25): ರಾಜ್ಯದಲ್ಲಿ ಸಾವಿರಾರು ಕೋಟಿ ಆಸ್ತಿ ಹೊಂದಿರುವ ಬಿಜೆಪಿ ರಾಜಕೀಯ ನಾಯಕರಿದ್ದು ಅವರ ಮನೆ, ಕಚೇರಿಗಳ ಮೇಲೆ ಏಕೆ ಐಟಿ ಅಧಿಕಾರಿಗಳು ಮೇಲೆ ನಡೆಸುತ್ತಿಲ್ಲವೆಂದು ಕಾಂಗ್ರೆಸ್ ಮುಖಂಡರು ದೂರಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ರೇಷ್ಮೆ ನಿಗಮ ಮಂಡಳಿ ಮಾಜಿ ಅದ್ಯಕ್ಷ ಡಿ ಬಸವರಾಜ್ , ಕಾಂಗ್ರೆಸ್ ಮುಖಂಡರು ನಾಯಕರ ಮನೆಗಳ ಮೇಲೆ ಮಾತ್ರ ಐಟಿ ದಾಳಿಗಳಾಗುತ್ತಿವೆ. ಐಟಿ ದಾಳಿಗಳನ್ನು ನೋಡಿದರೆ ಪ್ರಧಾನ ಮಂತ್ರಿ ಮೋದಿ ಕಾಂಗ್ರೆಸ್ ಮುಖಂಡರಿಗಷ್ಟೇ ಸುಪಾರಿ ಕೊಟ್ಟು ಬಿಜೆಪಿ ನಾಯಕರನ್ನು ರಕ್ಷಿಸುವಂತೆ ನಿರ್ದೇಶಿಸಿರುವಂತೆ ಕಾಣುತ್ತಿದೆ, ಎಂದಿದ್ದಾರೆ.
ಕೇಂದ್ರ ಸಚಿವ ಅನಂತಕುಮಾರ್, ಕಟ್ಟಾ ಸುಬ್ರಹ್ಮಣ್ಯಂ ನಾಯ್ಡು ,ಆರ್ ಅಶೋಕ್, ಸಿಟಿ ರವಿ ಶೋಭಾ ಕರಂದಾಜ್ಲೆ , ಯಡಿಯೂರಪ್ಪನವರು ನೂರಾರು ಕೋಟಿ ರೂಗಳ ಅಕ್ರಮ ಹಣ ಬೇನಾಮಿ ಆಸ್ತಿ ಹೊಂದಿದ್ದಾರೆ. ಇವರ ಮನೆಗಳ ಮೇಲೆ ಏಕೆ ಐಟಿ ದಾಳಿಗಳಾಗುತ್ತಿಲ್ಲವೆಂದು ಬಸವರಾಜ್ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.