Nov 12, 2018, 9:43 AM IST
ಅನಂತ್ ಕುಮಾರ್ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಪಕ್ಷ ಸಂಘಟನೆಗೆ ಹಾಗೂ ದೇಶಕ್ಕೆ ಅವರು ಸಲ್ಲಿಸಿರುವ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಂದ ಆರಂಭಿಸಿ ಕೇಂದ್ರ ಸಚಿವ ಸ್ಥಾನದ ಹೊಣೆಗಾರಿಕೆವರೆಗೆ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಅನಂತ್ ಕುಮಾರ್ ಬಿಜೆಪಿಯ ಇಂದಿನ ಅಸ್ತಿತ್ವದ ಹಿಂದಿನ ಶಕ್ತಿ ಎಂದು ಡಿ.ವಿ. ಸದಾನಂದ ಗೌಡ ಬಣ್ಣಿಸಿದ್ದಾರೆ.