ಹಿಂದೂ ವಿರೋಧಿ ಪ್ರಕಾಶ್ ರೈಗೆ ಉತ್ತರ ಕೊಡಲು ಬರುತ್ತಿದ್ದಾರಾ ಸುಬ್ರಮಣಿಯನ್ ಸ್ವಾಮಿ?

First Published May 3, 2018, 1:34 PM IST
Highlights

ಹಿಂದೂ ವಿರೋಧಿ ಹೇಳಿಕೆ ನೀಡುತ್ತಾ, ಮೋದಿಯನ್ನು ಟೀಕಿಸುತ್ತಾ  ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ಪ್ರಕಾಶ್ ರೈಗೆ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ  ಉತ್ತರ ಕೊಡಲಿದ್ದಾರೆ. 
 

ಬೆಂಗಳೂರು (ಮೇ 03): ಹಿಂದೂ ವಿರೋಧಿ ಹೇಳಿಕೆ ನೀಡುತ್ತಾ, ಮೋದಿಯನ್ನು ಟೀಕಿಸುತ್ತಾ  ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ಪ್ರಕಾಶ್ ರೈಗೆ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ  ಉತ್ತರ ಕೊಡಲಿದ್ದಾರೆ. 

ಸುಬ್ರಮಣಿಯನ್ ಸ್ವಾಮಿ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಲು ನಾಳೆ ಬೆಂಗಳೂರಿಗೆ ಆಗಮಿಸುವುದಾಗಿ ಟ್ವೀಟ್ ಮಾಡಿದ್ದಾರೆ. 

ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶ ನೀಡಲು ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದೇನೆ. ಒರಟು ಮನುಷ್ಯ ಪ್ರಕಾಶ್ ರೈ ಜೊತೆ ಹಿಂದುತ್ವದ ಬಗ್ಗೆ ಚರ್ಚೆ ಮಾಡಲಿದ್ದೇನೆ. ಅವರ ಪ್ರಶ್ನೆಗೆ ಉತ್ತರ ಕೊಡಲಿದ್ದೇನೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. 

 

I shall be at the Times Now fest tomorrow in Bengaluru at 4 pm to debate Cinema Rogue Prakash Raj on Influence of Hindutva in India

— Subramanian Swamy (@Swamy39)

 
ಮೇ. 05 ರಂದು ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆ ಇರುವುದರಿಂದ ತಯಾರಿ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಖಾಸಗಿ ವಾಹಿನಿ ಸಂದರ್ಶನಕ್ಕೆ ಬರುವ ಸಾಧ್ಯತೆ ಕಡಿಮೆ ಇದೆ ಎಂದೂ ಟ್ವೀಟ್ ಮಾಡಿದ್ದಾರೆ. 
ಒಟ್ಟಿನಲ್ಲಿ ಪ್ರಕಾಶ್ ರೈ ಹಾಗೂ ಸುಬ್ರಮಣಿಯನ್ ಸ್ವಾಮಿ ಮುಖಾಮುಖಿ ಕುತೂಹಲಕ್ಕೆ ಮೂಡಿಸಿದೆ.  

 

I may skip tomorrow Times Now fest because I have to prepare for National Herald case on 5 th— unless Times Now Mgmt begs me to come

— Subramanian Swamy (@Swamy39)
click me!