ವಿದ್ಯುತ್ ಕಂಬ ಏರಿದ ಚೆಸ್ಕಾಂ ಮಾಜಿ ನೌಕರನಿಗೆ ವಿದ್ಯುತ್ ಶಾಕ್

Published : May 03, 2018, 11:12 AM IST
ವಿದ್ಯುತ್ ಕಂಬ ಏರಿದ ಚೆಸ್ಕಾಂ ಮಾಜಿ ನೌಕರನಿಗೆ ವಿದ್ಯುತ್ ಶಾಕ್

ಸಾರಾಂಶ

ವಿದ್ಯುತ್ ಕಂಬ ಏರಿದ ಚೆಸ್ಕಾಂ ಮಾಜಿ ನೌಕರನಿಗೆ ವಿದ್ಯುತ್ ಶಾಕ್ ಹೊಡೆದಿರುವ ಘಟನೆ ಉಯಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.   ಶಿವಕುಮಾರ್ ವಿದ್ಯುತ್ ಕಂಬ ಏರಿದ ಮಾಜಿ ಗುತ್ತಿಗೆ ನೌಕರ. ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ, ಪರಿಶೀಲನೆಗೆ ಆಗಮಿಸಿದ್ದ ಚೆಸ್ಕಾಂ ಸಿಬ್ಬಂದಿ ಪುಟ್ಟರಾಜು ತಾನು ಕಂಬ ಹತ್ತುವ ಬದಲು ಶಿವಕುಮಾರ್‌ನನ್ನು  ಹತ್ತಿಸಿದ ಆರೋಪ ಕೇಳಿ ಬಂದಿದೆ.

ಮೈಸೂರು (ಮೇ. 03): ವಿದ್ಯುತ್ ಕಂಬ ಏರಿದ ಚೆಸ್ಕಾಂ ಮಾಜಿ ನೌಕರನಿಗೆ ವಿದ್ಯುತ್ ಶಾಕ್ ಹೊಡೆದಿರುವ ಘಟನೆ ಉಯಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಶಿವಕುಮಾರ್ ವಿದ್ಯುತ್ ಕಂಬ ಏರಿದ ಮಾಜಿ ಗುತ್ತಿಗೆ ನೌಕರ. ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ, ಪರಿಶೀಲನೆಗೆ ಆಗಮಿಸಿದ್ದ ಚೆಸ್ಕಾಂ ಸಿಬ್ಬಂದಿ ಪುಟ್ಟರಾಜು ತಾನು ಕಂಬ ಹತ್ತುವ ಬದಲು ಶಿವಕುಮಾರ್‌ನನ್ನು  ಹತ್ತಿಸಿದ ಆರೋಪ ಕೇಳಿ ಬಂದಿದೆ.  

ಶಿವಕುಮಾರ ಗುತ್ತಿಗೆ ಅವಧಿ 3 ತಿಂಗಳ ಹಿಂದೆಯೇ ಮುಗಿದಿತ್ತು. ಆದರೂ ಸಹಾಯಕ್ಕೆ ಅಂತ ಕರೆದುಕೊಂಡು ಹೋಗಿದ್ದ ಶಿವಕುಮಾರ್. ದುರಸ್ತಿ ಮಾಡುವ ವೇಳೆ ಶಿವಕುಮಾರ್‌ಗೆ ವಿದ್ಯುತ್ ಶಾಕ್ ಹೊಡೆದಿದೆ.  ಕಂಬದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಶಿವಕುಮಾರ್’ನನ್ನು ಕೂಡಲೇ ಕಂಬದಿಂದ ಇಳಿಸಿ ಹುಣಸೂರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.  ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?