ಗುಜರಾತ್‌ನಲ್ಲಿ ಶೇ.75ಕ್ಕಿಂತ ಜಾಸ್ತಿ ಮತದಾನವಾದರೆ ಬಿಜೆಪಿ ಸರ್ಕಾರ ಮರಳಿ ಬರಲು ತಿಣಕಾಡುವುದು ನಿಶ್ಚಿತವಂತೆ!

Published : Nov 21, 2017, 05:51 PM ISTUpdated : Apr 11, 2018, 12:36 PM IST
ಗುಜರಾತ್‌ನಲ್ಲಿ ಶೇ.75ಕ್ಕಿಂತ ಜಾಸ್ತಿ ಮತದಾನವಾದರೆ ಬಿಜೆಪಿ ಸರ್ಕಾರ ಮರಳಿ ಬರಲು ತಿಣಕಾಡುವುದು ನಿಶ್ಚಿತವಂತೆ!

ಸಾರಾಂಶ

2012ರಲ್ಲಿ ಮೋದಿ ಗುಜರಾತ್‌ನಲ್ಲಿ ಸತತ ಮೂರನೇ ಬಾರಿ ಗೆದ್ದಾಗ ಒಟ್ಟು 71.5 ಪ್ರತಿಶತ ಸರಾಸರಿ ವೋಟಿಂಗ್ ಆಗಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ಒಟ್ಟಾರೆ 62 ಪ್ರತಿಶತಕ್ಕಿಂತ ಕಡಿಮೆ ಮತದಾನ ಅಥವಾ 75 ಪ್ರತಿಶತಕ್ಕಿಂತ ಜಾಸ್ತಿ ಮತದಾನವಾದರೆ ಬಿಜೆಪಿ ಸರ್ಕಾರ ಮರಳಿ ರಚಿಸಲು ತಿಣಕಾಡುವುದು ನಿಶ್ಚಿತವಂತೆ.

2012ರಲ್ಲಿ ಮೋದಿ ಗುಜರಾತ್‌ನಲ್ಲಿ ಸತತ ಮೂರನೇ ಬಾರಿ ಗೆದ್ದಾಗ ಒಟ್ಟು 71.5 ಪ್ರತಿಶತ ಸರಾಸರಿ ವೋಟಿಂಗ್ ಆಗಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ಒಟ್ಟಾರೆ 62 ಪ್ರತಿಶತಕ್ಕಿಂತ ಕಡಿಮೆ ಮತದಾನ ಅಥವಾ 75 ಪ್ರತಿಶತಕ್ಕಿಂತ ಜಾಸ್ತಿ ಮತದಾನವಾದರೆ ಬಿಜೆಪಿ ಸರ್ಕಾರ ಮರಳಿ ರಚಿಸಲು ತಿಣಕಾಡುವುದು ನಿಶ್ಚಿತವಂತೆ.

ಆದರೆ ಹೀಗೆ ಮಾಡಲು ಕಾಂಗ್ರೆಸ್ ಬಳಿ ಕೂಡ ನಾಯಕತ್ವವೂ ಇಲ್ಲ ಮತ್ತು ಸಂಘಟನೆ ಕೂಡಾ ಇಲ್ಲ. ಹೀಗಾಗಿ ಕಾಂಗ್ರೆಸ್ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕುರ್ ಎಂಬ ಜಾತಿ ಸಂಘಟನೆ ಕಟ್ಟಿದ ಯುವಕರನ್ನು ನಂಬಿಕೊಂಡು ಕೆಲಸ ಮಾಡುತ್ತಿದೆ.

ಗುಜರಾತಿನಲ್ಲಿ ಓಡಾಡಿ ಸರ್ವೇ ನಡೆಸುತ್ತಿರುವ ಏಜೆನ್ಸಿಗಳ ಖಾಸಗಿ ಅಭಿಪ್ರಾಯದ ಪ್ರಕಾರ ಗುಜರಾತ್‌ನಲ್ಲಿ ಕಾಂಗ್ರೆಸ್ ಬದಲಾಗಿ ಯಾವುದೇ ಬೇರೆ ಪ್ರಾದೇಶಿಕ ಪಕ್ಷ ಇದ್ದಿದ್ದಲ್ಲಿ ಸುಲಭವಾಗಿ ಗೆಲ್ಲಬಹುದಿತ್ತಂತೆ. ಆದರೆ ಎದುರಿಗೆ ಕಾಂಗ್ರೆಸ್ ಇರುವುದರಿಂದ ಬಿಜೆಪಿ ಮತ್ತು ಮೋದಿ ಇಷ್ಟು ವಿರೋಧದ ನಡುವೆಯೂ ಗೆಲ್ಲುವ ಉತ್ಸಾಹವನ್ನು ಹೊರಗಂತೂ ತೋರಿಸುತ್ತಿದ್ದಾರೆ.

ಇಂಡಿಯಾ ಗೇಟ್’ನಲ್ಲಿ ಪ್ರಶಾಂತ್ ನಾತು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ