ಬಿಜೆಪಿ ಸೇರಿದ 4 TDP ಸಂಸದರು: ನಾಯ್ಡು ಫುಲ್ ಗರಂ!

Published : Jun 21, 2019, 01:10 PM ISTUpdated : Jun 21, 2019, 01:32 PM IST
ಬಿಜೆಪಿ ಸೇರಿದ 4 TDP ಸಂಸದರು: ನಾಯ್ಡು ಫುಲ್ ಗರಂ!

ಸಾರಾಂಶ

Z ಪ್ಲಸ್ ಭದ್ರತೆ ಇದ್ದರೂ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಚೆಕ್, ಕಚೇರಿ ಹಾಗೂ ಮನೆಯನ್ನು ಬಿಟ್ಟುಕೊಂಡು ಈಗಾಗಲೇ ಒಂದೊಂದಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಿರುವ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ಪಕ್ಷದ ರಾಜ್ಯ ಸಭಾ ಸದಸ್ಯರನ್ನೂ ಕಳೆದುಕೊಂಡು, ವಿಚಲಿತರಾಗಿದ್ದಾರೆ.

ನವದೆಹಲಿ [ಜೂ.21]: ಪ್ರಧಾನಿ ಪಟ್ಟ ಏರುವ ಕನಸು ಕಾಣುತ್ತಿದ್ದ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬೂ ನಾಯ್ಡುಗೆ ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನೂ ಬಿಡಬೇಕಾಯಿತು. ಜನರು ಹೀನಾಯವಾಗಿ ಸೋಲಿಸಿ, ದೊಡ್ಡ ಪೆಟ್ಟು ಕೊಟ್ಟಿದ್ದಾರೆ. ಅಲ್ಲದೇ ಜಗನ್ ಮೋಹನ್ ರೆಡ್ಡಿ ಆಂಧ್ರ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಲ್ಲೇ, ಝಡ್ ಪ್ಲಸ್ ಸೆಕ್ಯುರಿಟಿ ಇದ್ದರೂ ವಿಮಾನ ನಿಲ್ದಾಣದಲ್ಲಿ ಶ್ರೀ ಸಾಮಾನ್ಯನಂತೆ ಫ್ರಿಸ್ಕಿಂಗ್ ಮಾಡಿಸಿಕೊಳ್ಳಬೇಕಾಯಿತು. ನಂತರ ತಮ್ಮ ನೆಚ್ಚಿನ ಮನೆ, ಕಚೇರಿಯನ್ನೂ ಬಿಟ್ಟು ಕೊಡಬೇಕಾಯಿತು. 

ಇದೀಗ ಇದ್ದ ನಾಲ್ವರು ರಾಜ್ಯಸಭಾ ಸಂಸದರೂ ಬಿಜೆಪಿಗೆ ಸೇರಲು ಸಿದ್ಧರಾಗುತ್ತಿದ್ದು, ಏನು ಮಾಡಬೇಕೆಂದು ತೋಚದ ಚಂದ್ರಬಾಬು ನಾಯ್ಡು ಫುಲ್ ಗರಂ ಆಗಿದ್ದಾರೆ. 'ನಮ್ಮ ಪಕ್ಷದ ಶಕ್ತಿ ಕುಂದಿಸಲು ಬಿಜೆಪಿ ಯತ್ನಿಸುತ್ತಿದೆ. ಉದ್ದೇಶಪೂರ್ವಕವಾಗಿ ನಾಯಕರಿಂದಲೇ ಇಂತಹ ಕೃತ್ಯ ನಡೆಯುತ್ತಿದೆ,' ಎಂದು ಅವರು ಗೋಳಾಡುತ್ತಿದ್ದಾರೆ.

'ಬಿಜೆಪಿ ಇಂತಹ ಯತ್ನ ಮಾಡುತ್ತಿರುವುದು ಖಂಡನೀಯ, ಇಂತಹ ಕೃತ್ಯ ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಇಂತಹ ಯತ್ನಗಳು ನಡೆದಿವೆ.  ಆಂಧ್ರ ಪ್ರದೇಶದ ಹಿತದೃಷ್ಟಿಯಿಂದ ನಾವು ನಿರಂತರವಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡು ಬಂದೆವು. ಇದರಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ,' ಎಂದರು.

 

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ ಕಲ್ಪಿಸಲು ಕೇಂದ್ರ ಮಂತ್ರಿ ಸ್ಥಾನವನ್ನೂ ತೊರೆದು ಹೊರಬಂದೆವು. ಆದರೆ ಈಗ ನಮ್ಮ ಪಕ್ಷವರನ್ನು ಸೆಳೆಯುವ ಮೂಲಕ ಪಕ್ಷದ ಸಾಮರ್ಥ್ಯವನ್ನು ಕುಂದಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಸಿಎಂ ಕುರ್ಚಿ ಹೋಯ್ತಿ, ಮನೆಯೂ ಖಾಲಿ ಮಾಡ ಬೇಕು

ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಆಂಧ್ರದಲ್ಲಿ ಟಿಡಿಪಿ ಅತೀ ಕಡಿಮೆ ಸಂಖ್ಯೆ ಸ್ಥಾನ ಪಡೆದು ಸೋಲನ್ನು ಅನುಭವಿಸಿದ್ದು, ಇದಾದ ಬೆನ್ನಲ್ಲೇ ಹಲವು ಮುಖಂಡರು ಪಕ್ಷಾಂತರ ಮಾಡಿದ್ದರು.  ಇದೀಗ ಮತ್ತೆ ನಾಲ್ವರು ರಾಜ್ಯಸಭಾ ಸಂಸದರು ಬಿಜೆಪಿ ಕೈ ಹಿಡಿದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?