ಬಿಜೆಪಿಯಿಂದ ಟಿ 20 ಸೂತ್ರ : ಏನಿದು ಮಾಸ್ಟರ್ ಪ್ಲಾನ್..?

Published : Sep 17, 2018, 07:49 AM ISTUpdated : Sep 19, 2018, 09:27 AM IST
ಬಿಜೆಪಿಯಿಂದ ಟಿ 20 ಸೂತ್ರ : ಏನಿದು ಮಾಸ್ಟರ್ ಪ್ಲಾನ್..?

ಸಾರಾಂಶ

ಬಿಜಪಿ ಇದೀಗ ಮಾಸ್ಟರ್ ಪ್ಲಾನ್ ಒಂದನ್ನು ಮಾಡುತ್ತಿದೆ. ಅದರ ಹೊಸ ತಂತ್ರ ಟಿ 20 ಎಂಬ ಸೂತ್ರವಾಗಿದೆ. ಮುಂದಿನಲೋಕಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಈ ಹೊಸ ತಂತ್ರವನ್ನು ರೂಪಿಸಿದೆ. 

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ 2014 ರಲ್ಲಿ ಗಳಿಸಿದ್ದಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಲೇಬೇಕು ಎಂಬ ಗುರಿ ಹೊಂದಿರುವ ಭಾರತೀಯ ಜನತಾಪಕ್ಷವು, ಇದರ ಈಡೇರಿಕೆಗಾಗಿ ‘ಟಿ20 ’ ಸೂತ್ರದ ಮೊರೆ ಹೋಗಿದೆ. 20 ಓವರ್‌ಗಳ ಚುಟುಕು ಕ್ರಿಕೆಟ್‌ಗೆ ‘ಟಿ20 ’  ಎಂಬ ಪದ ವ್ಯಾಪಕವಾಗಿ ಬಳಕೆಯಲ್ಲಿದೆ. ಆ ಪದವನ್ನೇ ಬಿಜೆಪಿ ಬಳಸಿಕೊಳ್ಳುತ್ತಿದೆಯಾದರೂ, ಕ್ರಿಕೆಟ್‌ಗೂ ಪಕ್ಷಕ್ಕೂ ಸಂಬಂಧವಿಲ್ಲ.

ತನ್ನ ಪ್ರತಿ ಕಾರ್ಯಕರ್ತನನ್ನು ಆತ ವಾಸಿಸುವ  ಪ್ರದೇಶದ 20 ಮನೆಗಳಿಗೆ ಕಳುಹಿಸಿ, ಚಹಾ ಕುಡಿಯುತ್ತಾ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಬಿಜೆಪಿ ಕಾರ್ಯಕ್ರಮ ರೂಪಿಸಿದ್ದು, ಅದಕ್ಕೆ ‘ಟಿ20 ’ ಎಂಬ ನಾಮಕರಣ ಮಾಡಿದೆ.

ಮತದಾರರ ಜತೆ ನೇರ ಸಂಪರ್ಕ ಸಾಧಿ ಸುವ ಪ್ರಯತ್ನದ ಭಾಗವಾಗಿ ಬಿಜೆಪಿ ರೂಪಿಸಿರುವ ಕಾರ್ಯಕ್ರಮಗಳಲ್ಲಿ ಇದು ಕೂಡ ಒಂದಾಗಿದೆ. 2014ರ ಲೋಕಸಭೆ ಚುನಾವ ಣೆಗೂ ಮುನ್ನ ಅಂದು  ಪ್ರಧಾನಿ ಅಭ್ಯರ್ಥಿ ಯಾಗಿದ್ದ ನರೇಂದ್ರ ಮೋದಿ ಅವರು ಚಹಾ ಹೀರುತ್ತಾ ಮತದಾರರ ಜತೆ ಸಂವಾದ ನಡೆಸಲು ‘ಚಾಯ್ ಪೇ ಚರ್ಚೆ’ ಎಂಬ ವಿಶೇಷ ಕಾರ್ಯಕ್ರಮ ನಡೆಸಿದ್ದರು. 

ಅದರ ಮುಂದುವರಿದ ಭಾಗದಂತೆ ‘ಟಿ20’ ಇದೆ. ಇದಲ್ಲದೆ ನಮೋ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಯಾಗಲಿದ್ದು, ಹೆಚ್ಚು ಹೆಚ್ಚು ಜನರನ್ನು ಸೇರ್ಪಡೆಗೊಳಿಸುವ ಅಂಶ ಇರುತ್ತದೆ. ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ 100 ಜನರನ್ನು ಆ್ಯಪ್‌ಗೆ ಸೇರ್ಪಡೆ ಮಾಡುವ ಗುರಿಯನ್ನು ಕಾರ್ಯಕರ್ತರಿಗೆ ನೀಡಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

16 ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ, ಸತ್ತ ಸರ್ಕಾರದ ಮುಖ್ಯಮಂತ್ರಿ: ಪ್ರತಾಪ್ ಸಿಂಹ ವಾಗ್ದಾಳಿ
ನಮಗೆ ಭಿಕ್ಷುಕರಂತೆ ಭಿಕ್ಷೆ ಹಾಕ್ತಾರೆ; ₹10,000 ಕೋಟಿ ಅನುದಾನ ಕೊಡಿ, ಇಲ್ಲ ಪ್ರತ್ಯೇಕ ರಾಜ್ಯ ಮಾಡಿ-ರಾಜು ಕಾಗೆ