
ಬೆಳಗಾವಿ (ಡಿ.01): ಒತ್ತಡ, ಬೆದರಿಕೆ ಆಮಿಷಗಳ ನಡುವೆ ಪ್ರಾಮಾಣಿಕ ವರದಿ ನೀಡಿದ್ದೇವೆ ಎಂದು ವಿಧಾನಸಭೆಯಲ್ಲಿ ಎಸ್. ಆರ್. ವಿಶ್ವನಾಥ್ ಹೇಳಿದ್ದಾರೆ.
2178 ಎಕರೆ ಭೂಮಿ ಬೇನಾಮಿ ಹೆಸರಿನಲ್ಲಿದ್ದು, ಭೂಸ್ವಾಧೀನದಿಂದ ಕೈಬಿಡುವಲ್ಲಿ ದೊಡ್ಡ ಹಗರಣವೂ ನಡೆದಿದೆ ಎಂದು ಅವರು ಹೇಳಿದರು.
ಮುಂದುವರೆದು, 135 ಕಡತಗಳು ನಾಪತ್ತೆಯಾಗಿವೆ ಹಾಗೂ ವರದಿ ಸಿದ್ಧಪಡಿಸುವಾಗ ಅಧಿಕಾರಿಗಳಿಂದ ಸಹಕಾರ ಸಿಗಲಿಲ್ಲ. ಹೀಗಾಗಿ ಪೂರ್ಣ ವರದಿ ನೀಡಲು ಆಗಲಿಲ್ಲ ಎಂದು ಅವರು ಹೇಳಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಸಿ.ಟಿ ರವಿ, ಚಾರ್ಲ್ಸ್ ಶೋಭರಾಜ್’ನೇ ಅತೀ ದೊಡ್ಡ ಕ್ರಿಮಿನಲ್ ಅಂದ್ಕೊಂಡಿದ್ವಿ, ಆದರೆ ಇವರು ಅವನಿಗಿಂತ ದೊಡ್ಡ ಕ್ರಿಮಿನಲ್ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.