
ಬೆಳಗಾವಿ (ಡಿ.08): ನೋಟ್ಬ್ಯಾನ್ನಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕೆಲಸವೂ ಸಿಗುತ್ತಿಲ್ಲ. ಸಾಲ ಸೋಲ ಮಾಡಿ ಜೀವನ ಮಾಡುತ್ತಿದ್ದವರಿಗೆ ಕೂಲಿ ಕೆಲಸ ಮಾಡಿ ಸಾಲ ಪಾವತಿ ಮಾಡೋಕೆ ಈಗ ಕೈಗೆ ಕೆಲಸವೇ ಇಲ್ಲ. ಹಾಗಾಗಿ ಅವರ ಪಾಡು ಹೇಳತೀರದು.
ಬೆಳಗಾವಿಯಲ್ಲಿ ಫೈನಾನ್ಸ್ ಕಂಪನಿಗಳ ಬೆದರಿಕೆಗೆ ಹಾಗೂ ಮರ್ಯಾದೆಗೆ ಅಂಜಿದ ಮಹಿಳೆಯರು ತಮ್ಮ ತಾಳಿ ಮಾರಿ ಸಾಲ ಮರುಪಾವತಿಸುತ್ತಿದ್ದಾರೆ. ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿನ ಮಹಿಳೆಯರು ಕೆಲ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದಿದ್ದರು. ಈಗ 500, 1000 ರೂಪಾಯಿ ನೋಟ್ಬ್ಯಾನ್ ಆಗಿದ್ದರಿಂದ ಮಹಿಳೆಯರಿಗೆ ಕೂಲಿ ಕೆಲಸ ಸಿಗುತ್ತಿಲ್ಲ.
ಆದರೆ ಫೈನಾನ್ಸ್ ನವರು ಮಾತ್ರ ಸಾಲದ ಹಣ ವಾಪಸ್ ನೀಡುವಂತೆ ಪೀಡಿಸುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾರಂತೆ. ಹೀಗಾಗಿ ಕೆಲ ಮಹಿಳೆಯರು ಮರ್ಯಾದೆಗೆ ಅಂಜಿ ಮಂಗಳಸೂತ್ರ, ಚಿನ್ನಾಭರಣಗಳನ್ನ ಮಾರಾಟ ಮಾಡಿ ಸಾಲ ತುಂಬುತ್ತಿದ್ದಾರೆ. ಈ ವಿಚಾರ ಈಗ ಬೆಳಗಾವಿ ಡಿಸಿ ಕಚೇರಿಗೂ ತಲುಪಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.