
ನವದೆಹಲಿ(ಡಿ.08): ನೋಟ್ ಬ್ಯಾನ್ನಿಂದ ಆನ್ ಲೈನ್ ವ್ಯವಹಾರ ಹೆಚ್ಚಾಗಿದೆ, ನೋಟ್ ಬ್ಯಾನ್ ಮಾಡಿದಕ್ಕೆ ದೇಶದ ಜನತೆಯ ಬೆಂಬಲ ಸಿಕ್ಕಿದೆ ಎಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನಗದು ರಹಿತ ವಹಿವಾಟಿಗೆ ಹೆಚ್ಚು ಒತ್ತು ನೀಡಲಾಗಿದೆ, 4.5 ಕೋಟಿ ಗ್ರಾಹಕರು ಪೆಟ್ರೋಲ್, ಡೀಸೆಲ್ ಖರೀದಿಸುತ್ತಿದ್ದಾರೆ. ಇದರಲ್ಲಿ ಶೇ. 20ರಿಂದ 40ರಷ್ಟು ಗ್ರಾಹಕರಿಂದ ಕಾರ್ಡ್ ಬಳಸಿ ಇಂಧನ ತುಂಬಿಸಿಕೊಳ್ಳುತ್ತಿದ್ಧಾರೆ. ಕಾರ್ಡ್ ಬಳಸಿ ಇಂಧನ ತುಂಬಿಸಿಕೊಂಡರೆ ಪೆಟ್ರೋಲ್ ದರದಲ್ಲಿ ಶೇ. 0.75ರಷ್ಟು ವಿನಾಯಿತಿ, ರೈಲ್ವೆಯಲ್ಲಿ ಟಿಕೆಟ್ ಖರೀದಿಸಿದರೆ ಶೇ.0.5ರಷ್ಟು ರಿಯಾಯಿತಿ, ಆನ್`ಲೈನ್`ನಲ್ಲಿ ರೈಲ್ವೆ ಟಿಕೆಟ್ ಖರೀದಿಸಿದರೆ 10 ಲಕ್ಷ ವಿಮೆಯನ್ನ ನೀಡಲಾಗುತ್ತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ಧಾರೆ. ಇದೇವೇಳೆ, ಹೆದ್ದಾರಿಗಳಲ್ಲಿ ಆನ್`ಲೈನ್ ಟೋಲ್ ಶುಲ್ಕ ಪಾವತಿಗೆ ಆದ್ಯತೆ ನೀಡಲಾಗಿದ್ದು, ಆನ್ಲೈನ್ ಮೂಲಕ ಟೋಲ್ ಕಟ್ಟಿದರೆ ಶೇ.10ರಷ್ಟು ವಿನಾಯಿತಿ. ಆನ್`ಲೈನ್`ನಲ್ಲಿ ಎಲ್`ಐಸಿ ಕಟ್ಟಿದರೆ ಶೇ.8-10ರಷ್ಟು ವಿನಾಯಿತಿ ಸಿಗಲಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.