ಪಥ ಸಂಚಲನಗಳಿಂದ ಕಂಗೊಳಿಸಿದ ರಾಷ್ಟ್ರಪತಿ ಭವನ

Published : Jan 29, 2017, 04:29 PM ISTUpdated : Apr 11, 2018, 01:00 PM IST
ಪಥ ಸಂಚಲನಗಳಿಂದ ಕಂಗೊಳಿಸಿದ ರಾಷ್ಟ್ರಪತಿ ಭವನ

ಸಾರಾಂಶ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸೇನಾಪಡೆಯ ಕಮಾಂಡರ್​ಗಳು, ಗಣ್ಯಾತಿಗಣ್ಯರು  ಅಪರೂಪದ ಈ ಕ್ಷಣವನ್ನು ಕಣ್ತುಂಬಿಕೊಂಡರು.

ಇವತ್ತು ರಾಷ್ಟ್ರಪತಿ ಭವನವನ್ನು ಎರಡು ಕಣ್ಣುಗಳಿಂದ ನೋಡೋದಕ್ಕೆ ಸಾಲದಾಗಿತ್ತು. ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತಿತ್ತು. ಮೂರು ಸೇನೆಗಳ ಆಕರ್ಷಕ ಪಥಸಂಚಲನ ಇಡೀ ದೇಶವನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು.

ಇದು ರಾಷ್ಟ್ರಪತಿ ಆವರಣದಲ್ಲಿ ನಡೆದ ಬೀಟಿಂಗ್ ದಿ ರೀಟ್ರೀಟ್.  ಅಂದರೆ ಗಣರಾಜ್ಯೋತ್ಸದ ಸಮಾರೋಪ ಸಮಾರಂಭ ಪ್ರಯುಕ್ತ ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಯಿಂದ ನಡೆದ ಆಕರ್ಷಕ ಪಥಸಂಚಲನ.  ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸೇನಾಪಡೆಯ ಕಮಾಂಡರ್​ಗಳು, ಗಣ್ಯಾತಿಗಣ್ಯರು  ಅಪರೂಪದ ಈ ಕ್ಷಣವನ್ನು ಕಣ್ತುಂಬಿಕೊಂಡರು.

ಈ ಬಾರಿ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಸೌದಿ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಆಗಮಿಸಿದ್ದರಿಂದ ಈ ವರ್ಷ ಪಥಸಂಚಲನಕ್ಕೆ ವಿಶೇಷ ತಯಾರಿ ನಡೆದಿತ್ತು. ಅದೇ ಮಾದರಿಯಲ್ಲಿ ಇವತ್ತು ದೆಹಲಿಯ ವಿಜಯ್​ ಚೌಕ್​​​​​ನಲ್ಲಿ  ಬೀಟಿಂಗ್​ ದಿ ರೀಟ್ರೀಟ್’​ ನಡೀತು.

ಮೂರು ಸೇನೆಯ 16 ಮಿಲಿಟರಿ ಪಡೆಗಳ ಆರ್ಕಷಕ ಪಥಸಂಚಲನಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಇನ್ನೂ ಸಂಜೆಯಾಗುತ್ತಿದಂತೆ ವಿದ್ಯುತ್ ದ್ಪೀಪಗಳಿಂದ ರಾಷ್ಟ್ರಪತಿ ಭವನ ಕಂಗೊಳಿಸಿತ್ತು.  ಇದನ್ನು ನೋಡೋದಕ್ಕೆ ಎರಡು ಕಣ್ಣು ಸಾಲದಾಗಿತ್ತು. ಒಟ್ಟಿನಲ್ಲಿ  ಬೀಟಿಂಗ್​ ದಿ ರೀಟ್ರೀಟ್’ ನೊಂದಿಗೆ 68ನೇ ಗಣ ರಾಜ್ಯೋತ್ಸವ ಸಡಗರಕ್ಕೆ  ತೆರೆಬಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಶಾಂತ್ ನಾತು ಅಂಕಣ | ನಿತಿನ್ ನವೀನ್‌ಗೆ ಬಿಜೆಪಿ ಪಟ್ಟ ಸಿಕ್ಕಿದ್ದೇಗೆ? ಮೋದಿ-ಅಮಿತ್ ಶಾ ಕೊಟ್ಟ ಸಂದೇಶ ಏನು?
ದೇಶದ್ರೋಹಿಗಳಿಂದ ನುಸುಳುಕೋರರಿಗೆ ರಕ್ಷಣೆ : ಮೋದಿ ಕಿಡಿ