‘ಬೇಕೇ ಬೇಕು ಕಂಬಳ ಬೇಕು’

Published : Jan 29, 2017, 03:19 PM ISTUpdated : Apr 11, 2018, 01:05 PM IST
‘ಬೇಕೇ ಬೇಕು ಕಂಬಳ ಬೇಕು’

ಸಾರಾಂಶ

ನಾಳೆ ಹೈಕೋರ್ಟ್ ಕಂಬಳ ಆಚರಣೆಗೆ ಅನುಮತಿ ನೀಡಬೇಕೆಂದು  ಒತ್ತಾಯಿಸಿ, ಕರಾವಳಿ ಮಿತ್ರ ಮಂಡಳಿ ಸಂಘಟನೆಯವರು ಇಂದು  ಯಶವಂತಪುರದಿಂದ ಬೃಹತ್​​  ಬೈಕ್​​ ರ್ಯಾಲಿ ನಡೆಸಿದರು.

ಬೆಂಗಳೂರು (ಜ.29): ಕಂಬಳ ಉಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಹೋರಾಟ ಈಗ ಅಧಿಕೃತವಾಗಿ ಫ್ರೀಡಂ ಪಾರ್ಕ್​​ ತಲುಪಿದೆ. ​​​​​​

ನಾಳೆ ಹೈಕೋರ್ಟ್ ಕಂಬಳ ಆಚರಣೆಗೆ ಅನುಮತಿ ನೀಡಬೇಕೆಂದು  ಒತ್ತಾಯಿಸಿ, ಕರಾವಳಿ ಮಿತ್ರ ಮಂಡಳಿ ಸಂಘಟನೆಯವರು ಇಂದು  ಯಶವಂತಪುರದಿಂದ ಬೃಹತ್​​  ಬೈಕ್​​ ರ್ಯಾಲಿ ನಡೆಸಿದರು.

300ಕ್ಕೂ ಹೆಚ್ಚು ಬೈಕ್​​​’ಗಳ ಮೂಲಕ ಹೊರಟ ರ್ಯಾಲಿಯಲ್ಲಿ, 600ಕ್ಕೂ ಹೆಚ್ಚು ಜನ ಭಾಗವಹಿಸಿ ಕಂಬಳ ಕಾಪಾಡಿ ಎಂದು ಘೋಷಣೆ ಕೂಗಿದರು.

ಮಲ್ಲೇಶ್ವರಂ, ಆನಂದರಾವ್​ ಸರ್ಕಲ್​​​ ಮೂಲಕ ಸಾಗಿದ ಈ ಬೈಕ್​​​ ರ್ಯಾಲಿ, ಫ್ರೀಡಂ ಪಾರ್ಕ್​​​ ತಲುಪಿತು. ಇನ್ನು ಕರಾವಳಿ ಮಿತ್ರ ಮಂಡಳಿ ಅಧ್ಯಕ್ಷರಾದ ಸೌಂದರ್ಯ ರಮೇಶ್​ ಮಾತನಾಡಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆಗೆ  ಕೇಂದ್ರ ಸರ್ಕಾರ ಅನಿಮತಿ ನೀಡಿದೆ. ಆದ್ದರಿಂದ ಕರ್ನಾಟಕದಲ್ಲೂ ಕಂಬಳ ಆಚರಣೆಗೆ ಹೈಕೋರ್ಟ್​​​ ಅನುಮತಿ ನೀಡಬೇಕು ಎಂದರು.

ಒಂದು ವೇಳೆ  ಕೋರ್ಟ್​​​ ನಾಳೆ  ಅನುಮತಿ ನೀಡದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೀರವೈಶ ಲಿಂಗಾಯತ ಸಮಾಜ ಒಡೆದಾಳಲು ಯತ್ನ: ವಿಜಯೇಂದ್ರ
ತಾಕತ್ತಿದ್ರೆ ನೋಟಲ್ಲಿರುವ ಗಾಂಧಿ ಚಿತ್ರ ತೆಗೆಯಿರಿ: ಕೇಂದ್ರಕ್ಕೆ ಡಿಕೆಶಿ ಸವಾಲು!