ಪೌರಕಾರ್ಮಿಕರ ವೇತನ-ವೇದನೆ: ಮಂಗಳಾರತಿ ಮಾಡಿಸಿಕೊಂಡ ಬಿಬಿಎಂಪಿಯಿಂದ ಇಂದೇ ಸಂಬಳ

Published : Jul 10, 2018, 06:16 PM ISTUpdated : Jul 10, 2018, 06:18 PM IST
ಪೌರಕಾರ್ಮಿಕರ  ವೇತನ-ವೇದನೆ: ಮಂಗಳಾರತಿ ಮಾಡಿಸಿಕೊಂಡ ಬಿಬಿಎಂಪಿಯಿಂದ ಇಂದೇ ಸಂಬಳ

ಸಾರಾಂಶ

ಸಂಬಳ ಸಿಗದೇ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಪೌರಕಾರ್ಮಿಕ ಸುಬ್ರಮಣಿ ಇನ್ಮುಂದೆ ಪ್ರತಿ ತಿಂಗಳು 7ನೇ ತಾರೀಕಿಗೆ ಪೌರಕಾರ್ಮಿಕರಿಗೆ ವೇತನ ಪಾವತಿ

ಬೆಂಗಳೂರು: ಪೌರಕಾರ್ಮಿಕರೊಬ್ಬರ ಆತ್ಮಹತ್ಯೆಯ ಬಳಿಕ ಭಾರೀ ಚರ್ಚೆಗೆ ಗ್ರಾಸವಾಗಿದ್ದ ವೇತನ ಬಾಕಿ ವಿಚಾರವು ಇದೀಗ ಬಗೆಹರಿಯುವ  ಲಕ್ಷಣಗಳು ಗೋಚರಿಸಿವೆ. 

ಬಿಬಿಎಂಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ, ಜೂನ್ ತಿಂಗಳವರೆಗೆ ಬಾಕಿ ಇರುವ ಎಲ್ಲಾ ವೇತನವನ್ನುಇಂದೇ ಪೌರಕಾರ್ಮಿಕರಿಗೆ  ಪಾವತಿಸಲು ನಿರ್ಧರಿಸಲಾಗಿದೆ. 

ಜತೆಗೆ, ಪ್ರತಿ ತಿಂಗಳು 1ನೇ ತಾರೀಕಿನಂದು ಬಯೋಮೆಟ್ರಿಕ್ ಹಾಜರಾತಿ ವಿವರಗಳನ್ನು ಡೌನ್ ಲೋಡ್ ಮಾಡಿಕೊಂಡು, 7 ನೇ ತಾರೀಕು ಅಥವಾ ಅದಕ್ಕಿಂತ ಮುಂಚೆಯೇ  ವೇತವವನ್ನು ಕಾರ್ಮಿಕರ ಖಾತೆಗೆ ಜಮಾ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರಾವಿಡೆಂಟ್ ಫಂಡ್ ಮತ್ತು ಇಎಸ್ಐಗೆ ಸಂಬಂಧಿಸಿರುವ ತಾಂತ್ರಿಕ ಅಡಚಣೆಗಳನ್ನು 3 ದಿನಗಳೊಳಗೆ ಬಗೆಹರಿಸುವುದಾಗಿ ಬಿಬಿಎಂಪಿ ಹೇಳಿದೆ.

7 ತಿಂಗಳುಗಳಿಂದ ವೇತನ ಸಿಗದೆ ಜೀವನ ನಿರ್ವಹಣೆ ಸಾಧ್ಯವಾಗದೆ ನೊಂದಿದ್ದ ಪಾಲಿಕೆ ಪೌರಕಾರ್ಮಿಕ ಸುಬ್ರಮಣಿ ಎಂಬವರು ಭಾನುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ 18 ವರ್ಷಗಳಿಂದ ಸುಬ್ರಮಣಿ ಬಿಬಿಎಂಪಿಯಲ್ಲಿ ಸ್ವೀಪರ್ ಹಾಗೂ ಕಸಕೊಂಡೊಯ್ಯುವ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

"

ಒಂದು ಕಡೆ  ಸುಬ್ರಮಣಿ ಆತ್ಮಹತ್ಯೆ ಬಳಿಕ ರೊಚ್ಚಿಗೆದ್ದಿದ್ದ ಪೌರಕಾರ್ಮಿಕರು ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಬಿಬಿಎಂಪಿಯ ನಿರ್ಲಕ್ಷ್ಯತನವು ವ್ಯಾಪಕ ಟೀಕೆಗೊಳಗಾಗಿದೆ.

ಗುತ್ತಿಗೆ ಆಧಾರದಲ್ಲಿ ಕೆಲಸಮಾಡುತ್ತಿದ್ದ ಪೌರಕಾರ್ಮಿಕರಿಗೆ ಹೊಸವ್ಯವಸ್ಥೆಯಲ್ಲಿ ಬಿಬಿಎಂಪಿಯು ವೇತನಗಳನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸುತ್ತಿದೆ. ಬೆಂಗಳೂರಿನಲ್ಲಿ ಸುಮಾರು 16 ರಿಂದ 20 ಸಾವಿರ ಪೌರಕಾರ್ಮಿಕರಿದ್ದು, ಕಳೆದ ಜನವರಿಯಿಂದ ಹಲವು ಮಂದಿಗೆ ವೇತನ ಪಾವತಿಯಾಗಿಲ್ಲ. ಈ ಬಗ್ಗೆ ತಾಂತ್ರಿಕ ಅಡಚಣೆಗಳನನ್ನು ಮುಂದಿಟ್ಟುಕೊಂಡು, ಬಿಬಿಎಂಪಿ ಅಧಿಕಾರಿಗಳು ಮತ್ತು ದಲ್ಲಾಳಿಗಳು ಕಿರುಕುಳ ನೀಡುತ್ತಿದ್ದಾರೆಂದು ಪೌರಕಾರ್ಮಿಕರು ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ