
ಬೆಂಗಳೂರು(ಮಾ.26):ನೆಲಮಹಡಿ ಬರೆದು ಕೊಡಿ ಕಟ್ಟಡ ಉಪನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕಲು ವಿನೂತನ ನೀತಿಯೊಂದನ್ನು ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.
ಇನ್ನು ಮುಂದೆ ನೆಲಮಹಡಿಯೂ ಸೇರಿದಂತೆ 4 ಅಂತಸ್ತಿನ ಅಥವಾ ಅದಕ್ಕೂ ಹೆಚ್ಚಿನ ಅಂತಸ್ತಿನ ಕಟ್ಟಡ ನಿರ್ಮಿಸುವಾಗ ಮಾಲೀಕರು ನೆಲ ಅಂತಸ್ತನ್ನು ಪಾಲಿಕೆಗೆ ಕ್ರಯಕ್ಕೆ ನೀಡುವ ಕರಾರು ಮಾಡಿಕೊಳ್ಳಬೇಕು. ಕಟ್ಟಡ ನಿರ್ಮಾಣ ಬಳಿಕ ಕಟ್ಟಡ ನಿಯಮ ಬದ್ಧವಾಗಿದೆಯೇ ಎಂಬುದನ್ನು ಪಾಲಿಕೆ ಪರಿಶೀಲಿಸಲಿದೆ. ಕ್ರಮ ಬದ್ಧವಾಗಿದ್ದರೆ, ಕರಾರು ರದ್ದುಪಡಿಸಲಾ ಗುತ್ತದೆ. ಇಲ್ಲದ್ದಿದರೆ, ಬಿಬಿಎಂಪಿಯೇ ನೆಲ ಮಹಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.