ನಗರದ ಸಮಸ್ಯೆಗಳನ್ನು ನೀಗಿಸುವುದು ತನ್ನ ಗುರಿ: ಉಪಮೇಯರ್ ಅಭ್ಯರ್ಥಿ ಆನಂದ್ ಹೇಳಿಕೆ

By Internet DeskFirst Published Sep 28, 2016, 5:33 AM IST
Highlights

ಬೆಂಗಳೂರು(ಸೆ. 28): ನಗರದಲ್ಲಿ ಕಸದ ಸಮಸ್ಯೆ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ. ತನ್ನ ಅವಧಿಯಲ್ಲಿ ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುವುದು ಪ್ರಮುಖ ಗುರಿ ಎಂದು ಬಿಬಿಎಂಪಿ ಉಪಮೇಯರ್ ಸ್ಪರ್ಧಾಳು ಜೆಡಿಎಸ್'ನ ಆನಂದ್ ಹೇಳಿದ್ದಾರೆ. ಸುವರ್ಣನ್ಯೂಸ್ ವರದಿಗಾರ ಮುತ್ತಪ್ಪ ಲಮಾಣಿ ಜೊತೆ ಮಾತನಾಡಿದ ಆನಂದ್, ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ತನಗೆ ಅಸಮಾಧಾನವಿರುವುದನ್ನು ಒಪ್ಪಿಕೊಂಡಿದ್ದಾರೆ. ಪಕ್ಷದ ವರಿಷ್ಠರ ಜೊತೆ ಕೂತು ಈ ವಿಚಾರದಲ್ಲಿ ಸಮಾಲೋಚನೆ ನಡೆಸಿ ಮುಂದಿನ ನಡೆ ಇಡುವುದಾಗಿ ಜೆಡಿಎಸ್ ಕಾರ್ಪೊರೇಟರ್ ಹೇಳಿದ್ದಾರೆ.

click me!