ತಾಯಿ ಭೇಟಿ ಮಾಡಿದ ಭೂಗತ ಪಾತಕಿ ಬನ್ನಂಜೆ ರಾಜ

Published : Jul 09, 2018, 12:23 PM IST
ತಾಯಿ ಭೇಟಿ ಮಾಡಿದ ಭೂಗತ ಪಾತಕಿ ಬನ್ನಂಜೆ ರಾಜ

ಸಾರಾಂಶ

ತಾಯಿಯನ್ನು ನೋಡಲು ಮಾನವೀಯ ದೃಷ್ಟಿಯಿಂದ ಪಾತಕಿ ಬನ್ನಂಜೆ ರಾಜನನ್ನು ಉಡುಪಿ ಕರೆತರಲಾಗಿದ್ದು, ಅನಾರೋಗ್ಯ ಪೀಡಿತ ತಾಯಿಯನ್ನು ಇಂದು ಭೇಟಿ ಮಾಡಿದ್ದಾರೆ. 

ಉಡುಪಿ :  ಹಿಂಡಲಗಾ ಜೈಲಿನಲ್ಲಿರುವ ಖೈದಿಯಾಗಿರುವ ಬನ್ನಂಜೆ ರಾಜ ಇಂದು ಉಡುಪಿಗೆ ಆಗಮಿಸಿ ತಮ್ಮ ತಾಯಿಯನ್ನು ಭೇಟಿ ಮಾಡಿದ್ದಾರೆ.  ಮಲ್ಪೆ ಸಮೀಪದಲ್ಲಿರುವ ಸ್ವಗೃಹಕ್ಕೆ ಅವರ ತಾಯಿಯನ್ನು ನೋಡುವ ಸಲುವಾಗಿ ಪೊಲೀಸರು ರಾಜಾ ಅವರನ್ನು ಕರೆತಂದಿದ್ದರು.  

ನಿನ್ನೆಯಷ್ಟೇ ಹಿಂಡೆಲಗಾ ಜೈಲಿನಿಂದ ರಾಜನನ್ನು ಉಡುಪಿಗೆ ಕರೆತರಲಾಗಿದ್ದು, ಇಂದು ನಿವಾಸಕ್ಕೆ ಆಗಮಿಸಿ ತಾಯಿ ವಿಲಾಸಿನಿ ಶೆಟ್ಟಿಗಾರ್ ಅವರನ್ನು ಭೇಟಿ ಮಾಡಿದ್ದಾರೆ. ರಾಜಾ ಆಗಮನದ  ಹಿನ್ನೆಲೆಯಲ್ಲಿ ಮನೆಯ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. 

ರಾಜನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು,  ಈ ನಿಟ್ಟಿನಲ್ಲಿ ಪೊಲೀಸ್ ಭದ್ರತೆಯಲ್ಲೇ ತಾಯಿ ಮನೆಗೆ ಆಗಮಿಸಲಿದ್ದರು. 

ಮಾನವೀಯ ನೆಲೆಯಲ್ಲಿ ಮನೆ ಭೇಟಿಗೆ ನ್ಯಾಯಾಲಯವು ಅವಕಾಶ  ನೀಡಲಾಗಿದ್ದು, ಸದ್ಯ ವಿಚಾರಣಾಧೀನ‌ ಖೈದಿಯಾಗಿ ಹಿಂಡಲಗಾ ಜೈಲಿನಲ್ಲಿರುವ ರಾಜ, ಹದಿನೈದು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!