ಎಟಿಎಂ'ನಲ್ಲಿ 150 ರೂ. ಕಡಿತ: ಎಲ್ಲರಿಗೂ, ಎಲ್ಲ ಬ್ಯಾಂಕ್'ಗಳಲ್ಲಿ ಅನ್ವಯವಾಗುವುದಿಲ್ಲ

Published : Mar 03, 2017, 04:04 AM ISTUpdated : Apr 11, 2018, 12:43 PM IST
ಎಟಿಎಂ'ನಲ್ಲಿ 150 ರೂ. ಕಡಿತ: ಎಲ್ಲರಿಗೂ, ಎಲ್ಲ ಬ್ಯಾಂಕ್'ಗಳಲ್ಲಿ ಅನ್ವಯವಾಗುವುದಿಲ್ಲ

ಸಾರಾಂಶ

ಕೋಲ್ಕತ್ತಾ(ಮಾ.03): ಇನ್ನು ಮುಂದೆ ಎಟಿಎಂ'ಗಳಲ್ಲಿ 4ಕ್ಕಿಂತ ಹೆಚ್ಚು ಬಾರಿ ವಿತ್'ಡ್ರಾ ಮಾಡಿದರೆ 150 ರೂ. ಕಡಿತಗೊಳ್ಳುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ 150 ರೂ. ಕಡಿತಗೊಳ್ಳುವುದರ ಬಗ್ಗೆ ಬ್ಯಾಂಕುಗಳು ಸ್ಪಷ್ಟಿಕರಣ ನೀಡಿವೆ

ಕೋಲ್ಕತ್ತಾ(ಮಾ.03): ಇನ್ನು ಮುಂದೆ ಎಟಿಎಂ'ಗಳಲ್ಲಿ 4ಕ್ಕಿಂತ ಹೆಚ್ಚು ಬಾರಿ ವಿತ್'ಡ್ರಾ ಮಾಡಿದರೆ 150 ರೂ. ಕಡಿತಗೊಳ್ಳುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ.

ಆದರೆ 150 ರೂ. ಕಡಿತಗೊಳ್ಳುವುದರ ಬಗ್ಗೆ ಬ್ಯಾಂಕುಗಳು ಸ್ಪಷ್ಟಿಕರಣ ನೀಡಿವೆ

1) ವೇತನ ಖಾತೆ (salary account), ಹಿರಿಯ ನಾಗರಿಕರು ಹಾಗೂ 'ಆದ್ಯತೆ'ಗ್ರಾಹಕರಿಗೆ ಅನ್ವಯವಾಗುವುದಿಲ್ಲ.

2) ವೇತನ, ಹಿರಿಯ ನಾಗರಿಕರು ಹಾಗೂ ಆದ್ಯತೆಯ ಗ್ರಾಹಕರು ಎಟಿಎಂ'ನಲ್ಲಿ ಎಷ್ಟು ಬಾರಿ ಬೇಕಾದರೂ ವಿತ್'ಡ್ರಾ ಮಾಡಿಕೊಳ್ಳಬಹುದು.

3) ಸದ್ಯ ಹೆಚ್'ಡಿಎಫ್'ಸಿ, ಆಕ್ಸಿಸ್ ಹಾಗೂ ಐಸಿಐಸಿಐ ಬ್ಯಾಂಕ್'ಗಳಲ್ಲಿ 5ನೇ ಬಾರಿ ವಿತ್'ಡ್ರಾ ಮಾಡಿದರೆ ಹಣ ಕಡಿತಗೊಳ್ಳುತ್ತದೆ.

4) ಮೊದಲೆಲ್ಲ ಈ ಮೂರು ಬ್ಯಾಂಕ್'ಗಳಲ್ಲಿ ತಿಂಗಳಿಗೆ 5ನೇ ಬಾರಿ ವಿತ್'ಡ್ರಾ ಮಾಡುವಾಗ 100 ರೂ. ಹಣ ಕಡಿತಗೊಳ್ಳುತ್ತಿತ್ತು. ಈಗ  150 ರೂ. ಕಡಿತಗೊಳ್ಳುತ್ತದೆ.

5) ಆದ್ಯತಾ ಗ್ರಾಹಕರು: ಬ್ಯಾಂಕಿನಲ್ಲಿ ಕನಿಷ್ಠ ಒಂದು ಲಕ್ಷ ರೂ. ಠೇವಣಿಯಿಟ್ಟವರು ಆದ್ಯತಾ ಗ್ರಾಹಕರಾಗುತ್ತಾರೆ. ಇವರು ಎಷ್ಟು ಬಾರಿ ಬೇಕಾದರೂ ಎಟಿಎಂ'ನಲ್ಲಿ ವಿತ್'ಡ್ರಾ ಮಾಡಿಕೊಳ್ಳಬಹುದು. ಏಕೆಂದರೆ ಇವರಿಂದ ಆದಾಯ ಬರುವುದರಿಂದ ಬ್ಯಾಂಕು'ಗಳು ಆದ್ಯತಾ ಗ್ರಾಹಕರೆಂದು ಪರಿಗಣಿಸಿದೆ.

6) ಎಸ್'ಬಿಐ ಹಾಗೂ ಇತರ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್'ಗಳ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ  ಕನಿಷ್ಠ 25 ಸಾವಿರ ಠೇವಣಿಯಿಟ್ಟಿದ್ದರೆ ಅವರ ಬ್ಯಾಂಕ್'ಗಳಲ್ಲಿ ಎಷ್ಟು ಸಾರಿ ಬೇಕಾದರೂ ಹಣ ಡ್ರಾ ಮಾಡಿಕೊಳ್ಳಬಹುದು. ಇತರ ಬ್ಯಾಂಕ್'ಗಳಲ್ಲಿ 3 ಬಾರಿ ಉಚಿತ ಅವಕಾಶವಿರುತ್ತದೆ. ಎಸ್'ಬಿಐ ಶುಲ್ಕ ಏಪ್ರಿಲ್ 1ರಿಂದ ಅನ್ವಯವಾಗಲಿದೆ

7) ಇತರ ಬ್ಯಾಂಕ್'ಗಳಲ್ಲಿ(ಖಾಸಗಿ) ಕನಿಷ್ಠ 1 ಲಕ್ಷ ರೂ. ಠೇವಣಿಯಿಟ್ಟಿದ್ದರೆ ಅವರು ಎಷ್ಟು ಬಾರಿ ಬೇಕಾದರೂ ಹಣ ಡ್ರಾ ಮಾಡಿಕೊಳ್ಳಬಹುದು. ಅವರಿಗೆ ಯಾವುದೇ ಶುಲ್ಕವಿರುವುದಿಲ್ಲ.

8) ಎಸ್'ಬಿಐ'ನಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಠೇವಣಿಯಿಟ್ಟಿದ್ದ ಖಾತೆದಾರರಿಗೆ 5 ಬಾರಿಗಿಂತ ಹೆಚ್ಚು ಬಾರಿ ಹಣ ಡ್ರಾ ಮಾಡಿಕೊಂಡರೆ ಅವರಿಗೆ ಹಣ ಕಡಿತಗೊಳ್ಳುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?