ಸರ್ಕಾರಿ ಆಸ್ಪತ್ರೆಯ ಮೇಲೆಯೇ ಮೊಬೈಲ್ ಟವರ್! ಮೊಬೈಲ್ ರೇಡಿಯೇಶನ್'ಗಳಿಂದ ಗರ್ಭಿಣಿಯರಿಗೆ ತೊಂದರೆ

Published : Mar 03, 2017, 02:38 AM ISTUpdated : Apr 11, 2018, 12:35 PM IST
ಸರ್ಕಾರಿ ಆಸ್ಪತ್ರೆಯ ಮೇಲೆಯೇ ಮೊಬೈಲ್ ಟವರ್! ಮೊಬೈಲ್ ರೇಡಿಯೇಶನ್'ಗಳಿಂದ ಗರ್ಭಿಣಿಯರಿಗೆ ತೊಂದರೆ

ಸಾರಾಂಶ

ಆ ಆಸ್ಪತ್ರೆ ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕು. ಆದ್ರೆ ಸರ್ಕಾರಿ ಆಸ್ಪತ್ರೆ ಮೇಲೆಯ ಜೀವಕ್ಕೆ ಅಪಾಯವಿರುವ ಮೊಬೈಲ್ ಟವರ್ ಇದ್ದು, ಆಸ್ಪತ್ರೆಗೆ ದಾಖಲಾಗಬೇಕಾದ ರೋಗಿಗಳು ಟವರ್ ಸೂಸುವ ರೇಡಿಯೇಶನ್​'ನಿಂದ ಹಿಂದಕ್ಕೆ ಸರಿಯುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರದ ತಾಲೂಕ ಆಸ್ಪತ್ರೆ ಕಟ್ಟಡದ ಮೇಲೆ 12 ವರ್ಷಗಳಿಂದ ಮೊಬೈಲ್ ಟವರ್ ಇದ್ದು, ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ.

ಯಾದಗಿರಿ(ಮಾ.03): ಆ ಆಸ್ಪತ್ರೆ ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕು. ಆದ್ರೆ ಸರ್ಕಾರಿ ಆಸ್ಪತ್ರೆ ಮೇಲೆಯ ಜೀವಕ್ಕೆ ಅಪಾಯವಿರುವ ಮೊಬೈಲ್ ಟವರ್ ಇದ್ದು, ಆಸ್ಪತ್ರೆಗೆ ದಾಖಲಾಗಬೇಕಾದ ರೋಗಿಗಳು ಟವರ್ ಸೂಸುವ ರೇಡಿಯೇಶನ್​'ನಿಂದ ಹಿಂದಕ್ಕೆ ಸರಿಯುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರದ ತಾಲೂಕ ಆಸ್ಪತ್ರೆ ಕಟ್ಟಡದ ಮೇಲೆ 12 ವರ್ಷಗಳಿಂದ ಮೊಬೈಲ್ ಟವರ್ ಇದ್ದು, ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ.

ಸರಕಾರಿ ಆಸ್ಪತ್ರೆ ಮೇಲೆ ಕಳೆದ 12 ವರ್ಷಗಳಿಂದ ಮೊಬೈಲ್ ಟವರ್  ಹಾಕಲಾಗಿದ್ದು, ಟವರ್ ವಿಕಿರಣದಿಂದ ರೋಗಿಗಳು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. 2005 ರಲ್ಲಿ ಅವಿಭಜಿತ ಕಲಬುರಗಿ ಜಿಲ್ಲಾ ವ್ಯಾಪ್ತಿಗೆ ಯಾದಗಿರಿ ಜಿಲ್ಲೆ ಮತ್ತು ಸುರಪುರ ತಾಲೂಕು ಒಳಪಟ್ಟಿದ್ದವು. ಹೀಗಾಗಿ ಕಲಬುರಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅವರು ಟವರ್​'ನ್ನು ಆಸ್ಪತ್ರೆ ಮೇಲೆ ಸ್ಥಾಪಿಸಲು ಅನುಮತಿ ನೀಡಿದರು. ಒಪ್ಪಂದ ಮುಗಿದರೂ  ಇನ್ನೂ  ಬಾಡಿಗೆ ಪಾವತಿಯಾಗಿಲ್ಲ. ಇದರ ಜೊತೆಗೆ ವಿಕರಣಗಳು ರೋಗಿಗಳನ್ನು  ಮತ್ತಷ್ಟು   ಹೈರಾಣಾಗಿಸುತ್ತಿದೆ.

ಯಾವುದೇ ಸರಕಾರಿ ಆಸ್ಪತ್ರೆ ಹಾಗೂ ಶಾಲಾ ಕಾಲೇಜ್ ಕಟ್ಟಡದ ಮೇಲೆ ಮೊಬೈಲ್ ಟವರ್ ಅಳವಡಿಸಬಾರದು. ಆದರೆ ಈ ಆಸ್ಪತ್ರೆ ಮೇಲೆ ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳೇ ಅನುಮತಿ ನೀಡಿ ಟವರ್ ಅಳವಡಿಸುವ ಕೆಲಸ ಮಾಡಿದ್ದಾರೆ. ತಾಲೂಕು ಆಸ್ಪತ್ರೆಗೆ ಗರ್ಭೀಣಿಯರು, ನವಜಾತ ಶಿಶುಗಳು ಹಾಗೂ ನೂರಾರು ರೋಗಿಗಳು ಆಗಮಿಸಿ ಚಿಕಿತ್ಸೆಗೆ ದಾಖಲಾಗುತ್ತಾರೆ. ರೋಗ ಗುಣಮುಖರಾಗಲು ದಾಖಲಾದ್ರೆ ಮೊಬೈಲ್ ಟವರ್ ಹೊರಸುಸುವ ವಿಕಿರಣಗಳಿಂದ ಅನಾರೋಗ್ಯದ ಭಯ ಜನರಿಗೆ ಕಾಡುತ್ತಿದೆ. ಮೊಬೈಲ್ ಟವರ್ ವಿಕಿರಣದಿಂದ ವಿವಿಧ ಕಾಯಿಲೆಗಳು ಬರುತ್ತವೆಂದು ವೈದ್ಯರ ಹೇಳಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗೆ  ಪತ್ರ ಬರೆದು ಒಂದು ವರ್ಷ ಗತಿಸಿದರೂ ಇದೂವರೆಗೆ ಯಾವುದೇ ಉತ್ತರ ಮಾತ್ರ ಬಂದಿಲ್ಲ. 10 ವರ್ಷಗಳ ಒಪ್ಪಂದ ಮುಗಿಯುವ ಜೊತೆ 12 ವರ್ಷದ ಬಾಡಿಗೆ ಹಣ ನೀಡದೆ ಟವರ್ ಹಾಗೆ ಇಟ್ಟಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಬಾಡಿಗೆ ಹಣ ನೀಡುವ ಜೊತೆ ಈ ಡಂಜರ್ ಟವರ್ ತೆರವುಗೊಳಿಸಿ ರೋಗಿಗಳ ಆರೋಗ್ಯದ ಕಾಳಜಿ ತೊರಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಣ್ಣಲ್ಲಿ ಮರೆಯಾಗಿದ್ದ ಜೈನರ ಕಾಲದ ಕಲ್ಯಾಣಿಗೆ ಮರುಜೀವ ನೀಡಿದ ಉದ್ಯೋಗ ಖಾತ್ರಿ ಯೋಜನೆ
ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿಯಿಂದ ಗಲಾಟೆ; ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ!