ಮೋದಿ ಡಿಜಿಟಲ್ ಇಂಡಿಯಾ ಕನಸಿಗೆ ಕೈಜೋಡಿಸಿದ ಬ್ಯಾಂಕ್: ಎಲ್ಲಾ ಮನೆಗಳಿಗೂ 2 ಗಂಟೆ ಉಚಿತ ವೈ-ಫೈ ಸೇವೆ

Published : Dec 15, 2016, 11:31 PM ISTUpdated : Apr 11, 2018, 12:36 PM IST
ಮೋದಿ ಡಿಜಿಟಲ್ ಇಂಡಿಯಾ ಕನಸಿಗೆ ಕೈಜೋಡಿಸಿದ ಬ್ಯಾಂಕ್: ಎಲ್ಲಾ ಮನೆಗಳಿಗೂ 2 ಗಂಟೆ ಉಚಿತ ವೈ-ಫೈ ಸೇವೆ

ಸಾರಾಂಶ

ಟ್ ಬ್ಯಾನ್ ನಂತರ ಡಿಜಟಲ್ ಇಂಡಿಯಾದ ಕನಸು ವೇಗ ಪಡೆದುಕೊಳ್ಳುತ್ತಿದೆ. ಗ್ರಾಮೀಣ ಭಾರತವೂ ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುತ್ತಿದೆ. ಕ್ಯಾಶ್ ಲೆಸ್ ವ್ಯವಹಾರವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ವಿಜಯಾ ಬ್ಯಾಂಕ್ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಉಡುಪಿ ಜಿಲ್ಲೆಯ ಪುಟ್ಟ ಗ್ರಾಮ ಕುತ್ಯಾರು ಇದೀಗ ಡಿಜಿಟಲ್ ಗ್ರಾಮವಾಗಿ ಆಯ್ಕೆಯಾಗಿದೆ.

ಉಡುಪಿ(ಡಿ.16): ನೋಟ್ ಬ್ಯಾನ್ ನಂತರ ಡಿಜಟಲ್ ಇಂಡಿಯಾದ ಕನಸು ವೇಗ ಪಡೆದುಕೊಳ್ಳುತ್ತಿದೆ. ಗ್ರಾಮೀಣ ಭಾರತವೂ ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುತ್ತಿದೆ. ಕ್ಯಾಶ್ ಲೆಸ್ ವ್ಯವಹಾರವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ವಿಜಯಾ ಬ್ಯಾಂಕ್ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಉಡುಪಿ ಜಿಲ್ಲೆಯ ಪುಟ್ಟ ಗ್ರಾಮ ಕುತ್ಯಾರು ಇದೀಗ ಡಿಜಿಟಲ್ ಗ್ರಾಮವಾಗಿ ಆಯ್ಕೆಯಾಗಿದೆ.

ಇದು ಉಡುಪಿ ಜಿಲ್ಲೆಯ ಕುತ್ಯಾರ ಗ್ರಾಮ. ಸದ್ಯಕ್ಕೆ ಗ್ರಾಮದಲ್ಲಿರುವ ಒಂದೇ ಒಂದು ಬ್ಯಾಂಕ್. ಬಟ್ ಇನ್ಮುಂದೆ ಕ್ಯಾಶ್​ಲೆಸ್ ಗ್ರಾಮ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಹೌದು ಕರಾವಳಿ ಮೂಲದ ವಿಜಯಾ ಬ್ಯಾಂಕ್ ಡಿಜಿಟಲ್ ಗ್ರಾಮ ಅನ್ನೋ ಹೊಸ ಯೋಜನೆ ಶುರುಮಾಡಿದೆ. ತವರಿನಲ್ಲೇ ಹೊಸ ಯೋಜನೆ ಆರಂಭಿಸುವ ಉದ್ದೇಶದೊಂದಿಗೆ ಕುತ್ಯಾರ ಗ್ರಾಮವನ್ನ ಆಯ್ಕೆ ಮಾಡಿಕೊಂಡಿದೆ. ಜನವರಿ 26 ರಿಂದ ಈ ಯೋಜನೆಗೆ ಚಾಲನೆ ದೊರಕಲಿದೆ.

ಪ್ರತಿಯೊಬ್ಬ ಗ್ರಾಮಸ್ಥನಿಗೂ ಬ್ಯಾಂಕ್ ಅಕೌಂಟ್

ಎಲ್ಲಾ ಮನೆಗಳಿಗೂ 2 ಗಂಟೆ ಉಚಿತ ವೈ-ಫೈ ಸೇವೆ

ಮನೆಯಲ್ಲೇ ಕುಳಿತು ಬ್ಯಾಂಕಿಂಗ್ ವ್ಯವಹಾರ

ಸ್ವೈಪಿಂಗ್ ಮಷಿನ್ ಮೂಲಕವೇ ವ್ಯವಹಾರ

ವಿಜಯ ಬ್ಯಾಂಕ್ ದೇಶದಾದ್ಯಂತ 100 ಗ್ರಾಮಗಳನ್ನು  ಡಿಜಿಟಲ್ ಯೋಜನೆಗೆ ಒಳಪಡಿಸುವ ಕನಸು ಹೊಂದಿದೆ. ಒಟ್ಟಿನಲ್ಲಿ ಪ್ರಧಾನಿ ಮೋದಿಯವರ ಕ್ಯಾಶ್ ಲೆಸ್ ವ್ಯವಹಾರದ ಕನಸಿಗೆ ವಿಜಯ ಬ್ಯಾಂಕ್ ಕೈ ಜೋಡಿಸಿದ್ದು.. ಅದರಲ್ಲೂ ಕರಾವಳಿಯಿಂದಲೇ ಈ ಯೋಜನೆ ಆರಂಭಿಸಿದ್ದು ಹೆಮ್ಮೆಯ ವಿಚಾರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಕೋಳಿಗೆ ಚೀಪ್ ಆಗಿ ಮೊಟ್ಟೆ ಇಡು ಅನ್ನೋಕಾಗುತ್ತಾ?' ಮೊಟ್ಟೆಯ ದರದ ಬಗ್ಗೆ ಬಿಜೆಪಿ ಶಾಸಕನ ಪ್ರಶ್ನೆಗೆ ಶಿಕ್ಷಣ ಸಚಿವರ ಉತ್ತರ
ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ: ಕುತೂಹಲ!