
ಬೆಂಗಳೂರು(ಮೇ.04) ಬೆಂಗಳೂರಿಗರು ಇನ್ಮುಂದೆ ಜಲಪಾತಗಳನ್ನು ನೋಡಲು ನಗರ ಬಿಟ್ಟು ಹೊರಹೋಗಬೇಕಾಗಿಲ್ಲ. ನಗರದಲ್ಲೇ ಮಿನಿ ಜಲಪಾತವನ್ನು ನಿರ್ಮಿಸುವ ಯೋಜನೆ ಬಿಬಿಎಂಪಿ ಹಾಕಿಕೊಂಡಿದೆಯೆಂದು ಮೇಯರ್ ಪದ್ಮಾವತಿ ಹೇಳಿಕೊಂಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಗುವುದು ಅಂತಿತಹ ಜಲಪಾತವಲ್ಲ, ಕೆನಾಡದಲ್ಲಿರುವ ವಿಶ್ವವಿಖ್ಯಾತ ನಿಯಗಾರ ಜಲಪಾತವನ್ನೇ ಹೋಲುವ ಮಿನಿಜಲಪಾತವನ್ನು ಲಾಲ್'ಬಾಗ್'ನಲ್ಲಿ ನಿರ್ಮಿಸಲಾಗುವುದೆಂದು ಅವರು ಟ್ವಿಟರ್'ನಲ್ಲಿ ಹೇಳಿಕೊಂಡಿದ್ದಾರೆ.
ಮೇಯರ್ ಅವರ ಈ ಯೋಜನೆಗೆ ಕೆಲ ಟ್ವಿಟರಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಲಾಲ್ ಬಾಗನ್ನು ಅದರ ಪಾಡಿಗೆ ಬಿಟ್ಟುಬಿಡಿ ಎಂದೊಬ್ಬರು ಹೇಳಿದರೆ, ಇನ್ನೊಬ್ಬರು ಮೊದಲು ಸಾಯುತ್ತಿರುವ ಕೆರೆಗಳನ್ನು ಉಳಿಸಿ ಎಂದು ಸಲಹೆ ನೀಡಿದ್ದಾರೆ. ಹತ್ತಿರದಲ್ಲೇ ಜಗತ್ಪ್ರಸಿದ್ಧ ಜೋಗವಿರುವಾಗ ಇದರ ಅಗತ್ಯವಿದೆಯೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.