
ನವದೆಹಲಿ (ಜ.21): ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ವೀಸಾ ವಿಚಾರದಲ್ಲಿ ತಾರತಮ್ಯ ಮಾಡುತ್ತಾರೆಂದು ಕೇಳಿ ಬಂದಿರುವ ಆರೋಪಕ್ಕೆ, ಪ್ರತ್ಯುತ್ತರವಾಗಿ ಭಾರತೀಯರೆಲ್ಲರೂ ನನ್ನ ಜನ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ರವರು ಕೇವಲ ಮುಸಲ್ಮಾನರಿಗೆ ವೀಸಾ ಕೊಡುವಾಗ ಮಾತ್ರ ಕಾಳಜಿ ವಹಿಸುತ್ತಾರೆ. ಆದರೆ ಹಿಂದೂಗಳು ಭಾರತಕ್ಕೆ ವೀಸಾ ತೆಗೆದುಕೊಳ್ಳುವಾಗ ಸತಾಯಿಸುತ್ತಾರೆ. ಮೋದಿಜಿ ಈ ವಿಚಾರದ ಬಗ್ಗೆ ಗಮನಹರಿಸಿ ಎಂದು ಹಿಂದೂ ಜಾಗರಣ ಸಂಘ ಆರೋಪಿಸಿದೆ. ಇದಕ್ಕೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿ, ನನಗೆ ಜಾತಿ, ಧರ್ಮ ನನಗೆ ವಿಷಯವಾಗುವುದಿಲ್ಲ. ಭಾರತ ನನ್ನ ದೇಶ. ಇಲ್ಲಿಯವರೆಲ್ಲರೂ ನನ್ನ ಜನಗಳು ಎಂದು ಟ್ವಿಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.