
ಗೋಲಘಾಟ್ : ಅನಾರೋಗ್ಯದಿಂದ ಮೂತ್ರ ಪರೀಕ್ಷೆಗೆ ಒಳಗಾದ ರೈತ ನೋರ್ವ ಗರ್ಭ ಧರಿಸಿದ್ದಾರೆ ಎಂಬುದಾಗಿ ವೈದ್ಯಕೀಯ ವರದಿ ನೀಡಿದ ವಿಚಿತ್ರ ಘಟನೆ ಅಸ್ಸಾಂ ರಾಜ್ಯದ ಗೋಲಘಾಟ್ ಎಂಬಲ್ಲಿ ನಡೆದಿದೆ.
ಕೆಲ ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ರೈತ ಜೋಗೇಶ್ವರ್ ಬೋರಾ(42 ) ಎಂಬ ರೈತ, ಸಿಎಂ ಅವರ ಉಚಿತ ಪರೀಕ್ಷೆ ಸೇವೆ ಯೋಜನೆಯಡಿ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮೂತ್ರ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಬೋರಾ ಗರ್ಭ ಧರಿಸಿದ್ದಾರೆ ಎಂದು ವರದಿ ನೀಡಲಾಗಿತ್ತು.
ಇದನ್ನು ಮೆಡಿಕಲ್ ಮಾಲೀಕರಿಗೆ ತೋರಿಸುವ ಮುನ್ನ, ಈ ವರದಿಯಲ್ಲಿ ಏನಿದೆ ಎಂಬುದೇ ಗೊತ್ತಿರಲಿಲ್ಲ. ಬಳಿಕ ಮೆಡಿಕಲ್ ಮಾಲೀಕನವರಿಂದ ತಿಳಿದುಕೊಂಡೆ. ಕೊನೆಗೆ ಖಾಸಗಿ ಆಸ್ಪತ್ರೆಯಿಂದ ಈ ವರದಿ ದೋಷ ಪೂರಿತ ಎಂದು ತಿಳಿಯಿತು ಎಂದಿದ್ದಾರೆ ಬೋರಾ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.