ಅಶೋಕ್ ಖೇಣಿಗೆ ಮಣೆ ಹಾಕ್ತಾರಾ ಸಿಎಂ?

Published : Mar 28, 2018, 01:42 PM ISTUpdated : Apr 11, 2018, 12:57 PM IST
ಅಶೋಕ್ ಖೇಣಿಗೆ ಮಣೆ ಹಾಕ್ತಾರಾ ಸಿಎಂ?

ಸಾರಾಂಶ

ಕೈ  ಪಾಳಯ ಸೇರಿದ  ಅಶೋಕ್ ಖೇಣಿಗೆ ಟಿಕೆಟ್ ಸಿಗುವುದು ಇನ್ನು ನಿಶ್ಚಿತವಾಗಿಲ್ಲ.  ಟಿಕೆಟ್ ಫೈನಲ್ ಏನಿದ್ದರೂ ಸ್ಕ್ರೀನಿಂಗ್ ಕಮಿಟಿ, ಕಾಂಗ್ರೆಸ್  ಕೇಂದ್ರ ಚುನಾವಣ ಸಮಿತಿ ನಿರ್ಧರಿಸಲಿದೆ ಎಂದು ಸಿಎಂ ಹೇಳಿದ್ದಾರೆ.   ಬೀದರ್ ದಕ್ಷಿಣ ಕ್ಷೇತ್ರಕ್ಕೆ ಎರಡು ಹೆಸರನ್ನ ಶಿಫಾರಸ್ಸು ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ  ಪರಮೇಶ್ವರ್  ನಿರ್ಧಾರಿಸಿದ್ದಾರೆ. 

ಬೆಂಗಳೂರು (ಮಾ. 28): ಇತ್ತೀಚಿಗಷ್ಟೇ  ಕೈ  ಪಾಳಯ ಸೇರಿದ  ಅಶೋಕ್ ಖೇಣಿಗೆ ಟಿಕೆಟ್ ಸಿಗುವುದು ಇನ್ನು ನಿಶ್ಚಿತವಾಗಿಲ್ಲ.  ಟಿಕೆಟ್ ಫೈನಲ್ ಏನಿದ್ದರೂ ಸ್ಕ್ರೀನಿಂಗ್ ಕಮಿಟಿ, ಕಾಂಗ್ರೆಸ್  ಕೇಂದ್ರ ಚುನಾವಣ ಸಮಿತಿ ನಿರ್ಧರಿಸಲಿದೆ ಎಂದು ಸಿಎಂ ಹೇಳಿದ್ದಾರೆ.  

ಬೀದರ್ ದಕ್ಷಿಣ ಕ್ಷೇತ್ರಕ್ಕೆ ಎರಡು ಹೆಸರನ್ನ ಶಿಫಾರಸ್ಸು ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ  ಪರಮೇಶ್ವರ್  ನಿರ್ಧಾರಿಸಿದ್ದಾರೆ. 

ಅಶೋಕ್ ಖೇಣಿ ಹಾಗೂ ಧರ್ಮಸಿಂಗ್ ಅಳಿಯ ಚಂದ್ರಸಿಂಗ್ ಇಬ್ಬರ ಹೆಸರನ್ನ ಬೀದರ್ ದಕ್ಷಿಣ ಕ್ಷೇತ್ರಕ್ಕೆ ಶಿಫಾರಸ್ಸು ಮಾಡಲಾಗಿದೆ.  ಬೀದರ್ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಮಾತ್ರ ಒಂದು ಹೆಸರು ಸೂಚನೆ ಮಾಡಲಾಗಿದೆ.  ಇನ್ನುಳಿದ ಮೂರು ಕ್ಷೇತ್ರಕ್ಕೆ ಎರಡು ಅಭ್ಯರ್ಥಿಗಳ ಹೆಸರನ್ನು ಜಿಲ್ಲಾ ಉಸ್ತುವಾರಿ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ. 

ಭಾಲ್ಕಿಯಿಂದ  ಈಶ್ವರ್ ಖಂಡ್ರೆ,  ಹುಮ್ನಾಬಾದ್’ನಿಂದ  ರಾಜಶೇಖರ್ ಪಾಟೀಲ್,  ಬೀದರ್ ದಕ್ಷಿಣದಿಂದ ಅಶೋಕ್ ಖೇಣಿ, ಚಂದ್ರಸಿಂಗ್, ಬೀದರ್’ನಿಂದ ರಹೀಮ್ ಖಾನ್,  ಔರಾದ್’ನಿಂದ  ಭಿಮಸೇನ್ ರಾವ್ ಸಿಂಧೆ, ವಿಜಯ ಕುಮಾರ್ ಕೌಡಾಳೆ
ಬಸವಕಲ್ಯಾಣದಿಂದ ನಾರಾಯಣ ಮತ್ತು ಶಿವರಾಜ್ ನರಶೇಟ್ಟಿ ನಡುವೆ ತೀವ್ರ ಪೈಪೋಟಿ ಇದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ